Advertisement

ಚಿಕ್ಕಮಗಳೂರು: ಅಮಾನತುಗೊಂಡಿದ್ದ ಜ್ಯೋತಿ ಡಿಸೋಜಾ ಮತ್ತೆ ನಿಯೋಜನೆ

03:55 PM Dec 02, 2021 | Team Udayavani |

 ಚಿಕ್ಕಮಗಳೂರು: ಹಣ ದುರುಪಯೋಗದ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಕೂದುವಳ್ಳಿ ಕೃಷಿಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಜ್ಯೋತಿ ಎಫ್‌. ಡಿಸೋಜಾ ಅವರನ್ನು ನ್ಯಾಯಾಲಯದ ಮಧ್ಯಂತರ ಆದೇಶದ ಅನ್ವಯ ಮತ್ತೆ ನಿಯೋಜನೆ ಮಾಡಿಕೊಳ್ಳಲಾಗಿದೆ.

Advertisement

ಬುಧವಾರ ಸಂಘದ ಅಧ್ಯಕ್ಷ ಎಸ್‌.ಡಿ.ಉಮೇಶ್‌ ಅವರು ಜ್ಯೋತಿ ಎಫ್‌ ಡಿಸೋಜಾ ಅವರಿಗೆ ಹುದ್ದೆಗೆ ಹಾಜರಾಗುವಂತೆ ಆದೇಶಪತ್ರ ನೀಡಿದರು.

ನ್ಯಾಯಾಲಯದ ಮಧ್ಯಂತರ ಆದೇದಂತೆ ಅಂತಿಮ ಆದೇಶದ ಷರತ್ತಿಗೊಳಪಟ್ಟು ಕೂದುವಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ ಕೂಡಲೇ ಕರ್ತವ್ಯದ ಮೇಲೆ ಹಾಜರಾಗುವಂತೆ ಸಂಘದ ಅಧ್ಯಕ್ಷ ಎಸ್‌.ಡಿ. ಉಮೇಶ್‌ ಅವರು ನೀಡಿರುವ ಪತ್ರದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next