Advertisement

ಲಾಕ್ ಡೌನ್ ಉಲ್ಲಂಘಿಸಿ ರಥೋತ್ಸವ ನಡೆಸಿದ್ದ ರಾವೂರ ಗ್ರಾಮದ 13 ಜನರ ಬಂಧನ

09:16 AM Apr 19, 2020 | keerthan |

ಕಲಬುರಗಿ: ಲಾಕ್ ಡೌನ್ ಉಲ್ಲಂಘಿಸಿ ರಥೋತ್ಸವ ನೆರವೇರಿಸಿದ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದ ಸಿದ್ಧಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ನ 13 ಜನರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಟ್ರಸ್ಟ್ ಕಾರ್ಯದರ್ಶಿ ಗುಂಡಣ್ಣ ಬಾಳಿ ಸೇರಿ 13 ಜನರನ್ನು ಬಂಧಿಸಲಾಗಿದೆ.

ಕಳೆದ ಗುರುವಾರ ಲಾಕ್ ಡೌನ್ ನಡುವೆ ನಿಯಮ ಉಲ್ಲಂಘಿಸಿ ಸಿದ್ಧಲಿಂಗೇಶ್ವರ ದೇವಸ್ಥಾನದ ರಥೋತ್ಸವ ಮಾಡಿದ್ದರು. ಮುಂಜಾನೆ ವೇಳೆಗೆ ನೂರಾರು ಜನರು ಸೇರಿ ರಥೋತ್ಸವ ಮಾಡಿದ್ದರು.

ರಥೋತ್ಸವ ಮಾಡುವುಲ್ಲಾ ಎಂದು ಮೊದಲು ಪೊಲೀಸರಗೆ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಆದರೆ ನಂತರ ಪೊಲೀಸರಿಗೆ ಮಾಹಿತಿ ನೀಡದೆ ರಥೋತ್ಸವ ನಡೆಸಿದ್ದರು.

ವಾಡಿ ಠಾಣೆ ಪೊಲೀಸರು ಟ್ರಸ್ಟ್ ನ 13 ಜನರನ್ನು ಪೊಲೀಸರು ಬಂಧಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next