Advertisement

ರವೀಶ ತಂತ್ರಿ ಮೇಲೆ ಹಲ್ಲೆ ಯತ್ನ: ನಾಲ್ವರಿಗೆ ಗಾಯ

07:20 PM Apr 21, 2019 | Team Udayavani |

ಕಾಸರಗೋಡು: ಚುನಾವಣ ಪ್ರಚಾರ ಅಂತಿಮ ಹಂತದಲ್ಲಿ ಕಾಸರಗೋಡು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಅವರ ಮೇಲೆ ರವಿವಾರ ಬೆಳಗ್ಗೆ ಕಾಂಞಂಗಾಡ್‌ ಸಮೀಪದ ಮಡಿಕೈಯಲ್ಲಿ ತಂಡವೊಂದು ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.

Advertisement

ಹಲ್ಲೆ ತಡೆಯುವ ವೇಳೆ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಗಂಭೀರ ಗಾಯ ಗೊಂಡಿರುವ ಛಾಯಾಚಿತ್ರಗ್ರಾಹಕನನ್ನು ಕಾಂಞಂಗಾಡ್‌ನ‌ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮಡಿಕೈ ಕೋತೋಡಪಾರದಲ್ಲಿ ರವಿವಾರ ಬೆಳಗ್ಗೆ 9.30ಕ್ಕೆ ಈ ಘಟನೆ ನಡೆದಿದೆ. ಎನ್‌ಡಿಎ ಚುನಾವಣ ಪ್ರಚಾರ ಕಾರ್ಯ ನಡೆಯುತ್ತಿದ್ದಂತೆ ಅಲ್ಲಿಗೆ ಎಡರಂಗ ಪ್ರಚಾರದ ವಾಹನಗಳು ಆಗಮಿಸಿ ಪ್ರಚಾರ ನಡೆಸುತಿದ್ದವು. ಈ ಮಧ್ಯೆ ಬೈಕ್‌ನಲ್ಲಿ ಬಂದ ವ್ಯಕ್ತಿಯೋರ್ವ ರವೀಶ ತಂತ್ರಿ ಅವರ ಸಮೀಪಕ್ಕೆ ಬಂದು ಅವರ ಕೈಯಲ್ಲಿದ್ದ ಮೈಕ್‌ ಹಿಡಿದೆಳೆದು ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಕಾರ್ಯಕ್ರಮದಲ್ಲಿದ್ದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ವೇಲಾಯುಧನ್‌, ಮಂಡಲಾಧ್ಯಕ್ಷ ಎನ್‌. ಮಧು, ಕರ್ಷಕ ಮೋರ್ಚಾ ಮುಖಂಡ ಇ. ಕೃಷ್ಣನ್‌ ಹಲ್ಲೆಯನ್ನು ತಡೆದರು. ಈ ದೃಶ್ಯವನ್ನು ಕೆಮರಾದಲ್ಲಿ ಸೆರೆಹಿಡಿಯುತ್ತಿದ್ದ ಫೋಟೋಗ್ರಾಫರ್‌ನ ಮೇಲೆಯೂ ವ್ಯಕ್ತಿ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿದ್ದಾನೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.

ಈ ಪೈಕಿ ಗಂಭೀರ ಗಾಯಗೊಂಡಿರುವ ಫೋಟೋಗ್ರಾಫರ್‌ ಶ್ರಾವಣ್‌ (28) ಅವರನ್ನು ಕಾಂಞಂಗಾಡ್‌ನ‌ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ. ಕೆಲವು ದಿನಗಳ ಹಿಂದೆ ಕಲ್ಯಾಶೆÏàರಿಯಲ್ಲಿ ರವೀಶ ತಂತ್ರಿ ಅವರ ಪ್ರಚಾರ ವಾಹನವನ್ನು ತಡೆದು ಹತ್ಯೆ ಬೆದರಿಕೆಯೊಡ್ಡಿದ ಘಟನೆ ಕೂಡ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next