Advertisement

ಪಡಿತರ ಸಾಗಾಟ: ಲಾರಿಗಳ ವಶ

01:40 PM Nov 23, 2018 | Team Udayavani |

ಹರಿಹರ: ಪಡಿತರ ಧಾನ್ಯಗಳ ಸಾಗಣೆ ಮಾಡುತ್ತಿದ್ದ ಲಾರಿಗಳನ್ನು ಗುರುವಾರ ರಾತ್ರಿ ವಶಪಡಿಸಿಕೊಂಡ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸಿಪಿಐ ಗುರುನಾಥ್‌ ನೇತೃತ್ವದ ತಂಡ ಎಪಿಎಂಸಿ ಆವರಣದಲ್ಲಿ ಅಕ್ಕಿ ತುಂಬಿಕೊಂಡು ನಿಂತಿದ್ದ ಎಸ್‌.ಕೆ. ಟ್ರೇಡರ್ ಹೆಸರಿನ ಎರಡು ಲಾರಿಗಳನ್ನು ವಶಪಡಿಸಿಕೊಂಡು ದಾಖಲೆ ಪರಿಶೀಲನೆಗೆ ಇಬ್ಬರನ್ನು ಠಾಣೆಗೆ ಕರೆದೊಯ್ದಿದ್ದಾರೆ.

Advertisement

ಲಾರಿಗಳ ಮೇಲೆ ಅನ್ನಭಾಗ್ಯ ಯೋಜನೆ ಎಂದು ಬರೆದಿದೆಯಾದರೂ ಅದರಲ್ಲಿದ್ದ ಅಕ್ಕಿ ವಿತರಣೆ ಹಾಗೂ ಸಾಗಣೆ ಬಗ್ಗೆ ಸೂಕ್ತ ದಾಖಲೆಗಳನ್ನು ತೋರಿಸಲು ಚಾಲಕರು ವಿಫಲರಾದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ದಾಳಿಯಲ್ಲಿ ಪಿಎಸ್‌ಐ ಸಿದ್ದೇಗೌಡ, ಸಿಬ್ಬಂದಿಗಳಾದ ದ್ವಾರಕೀಶ್‌, ರಮೇಶ್‌, ಅನಿಲ್‌ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next