Advertisement

ಮಂಗಳೂರು: ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನ: ಅವಭೃಥ ಉತ್ಸವ

04:04 PM Jan 30, 2023 | Team Udayavani |

ರಥಬೀದಿ(ಮಂಗಳೂರು):ನಗರದ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಬ್ರಹ್ಮ ರಥೋತ್ಸವ ಪ್ರಯುಕ್ತ ರವಿವಾರ ಶ್ರೀ ದೇವರ ಅವಭೃಥ ಉತ್ಸವ (ಓಕುಳಿ) ನಡೆಯಿತು.

Advertisement

ಇದನ್ನೂ ಓದಿ:ಏಪ್ರಿಲ್ 1 ರಿಂದ 15 ವರ್ಷಕ್ಕಿಂತ ಹಳೆಯದಾದ 9 ಲಕ್ಷ ವಾಹನಗಳು ಗುಜರಿಗೆ: ಗಡ್ಕರಿ

ಪ್ರಾರಂಭದಲ್ಲಿ ಶ್ರೀ ದೇವರ ವಸಂತ ಮಂಟಪದಲ್ಲಿ ಅವಭೃಥ ಪೂಜೆಯ ಬಳಿಕ ಕಾಶೀ ಮಠಾಧೀಶರಾದ ಶ್ರೀಮತ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರಿಂದ ಆಶೀರ್ವಚನ ನೆರವೇರಿತು. ಭಕ್ತರಿಂದ ಉರುಳು ಸೇವೆ ನಡೆದು ಬಳಿಕ ಶ್ರೀ ದೇವರ 5 ಪೇಟೆಗಳ ಉತ್ಸವ ಸಾವಿರಾರು ಭಜಕರ ಪಾಲ್ಗೊಳ್ಳುವಿಕೆಯಲ್ಲಿ ನಡೆಯಿತು.

ರಾತ್ರಿ ದೇವರ ಕೆರೆಯಲ್ಲಿ ಅವಭೃಥ ಸ್ನಾನ, ಧ್ವಜಾವರೋಹಣ ಮತ್ತು ಪೂಜೆ ನೆರವೇರಿತು. ಅವಭೃಥ ಉತ್ಸವದ ಅಂಗವಾಗಿ ಭಕ್ತರು ಗುಲಾಬಿ ಬಣ್ಣದ ನೀರನ್ನು ಪರಸ್ಪರ ಎರಚಿ ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next