Advertisement

ರಥಸಪ್ತಮಿ- ಸೂರ್ಯನಮಸ್ಕಾರ ಕಾರ್ಯಕ್ರಮ

04:25 PM Feb 20, 2021 | Team Udayavani |

ಚಿಕ್ಕಮಗಳೂರು: ರಥಸಪ್ತಮಿ ಅಂಗವಾಗಿ ಜಿಲ್ಲೆಯ ವಿವಿಧೆಡೆ ಶ್ರದ್ಧಾಭಕ್ತಿಯಿಂದ ಸೂರ್ಯಮಂತ್ರದೊಂದಿಗೆ ಸೂರ್ಯ ನಮಸ್ಕಾರ, ಭಜನೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.

Advertisement

ಬೋಳರಾಮೇಶ್ವರ ದೇವಸ್ಥಾನದಲ್ಲಿ ಪತಂಜಲಿ ಯೋಗ ಸಮಿತಿ, ಮಹಿಳಾ ಯೋಗ ಸಮಿತಿ ಹಾಗೂ ಕಿಸಾನ್‌ ಸೇವಾ ಪಂಚಾಯತ್‌ನಿಂದ ಶುಕ್ರವಾರ ನೂರಾರು ಭಕ್ತರು ಭಜನೆ, ಸೂರ್ಯಮಂತ್ರ, ಸೂರ್ಯ ನಮಸ್ಕಾರ ಮಾಡಿದರು.

ಈ ಸಂದರ್ಭದಲ್ಲಿ ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ದಿವಾಕರ ಭಟ್‌, ಪತಂಜಲಿ ಯೋಗ ಸಮಿತಿಯ ಜನಕರಾಜ್‌ ಅರಸ್‌, ಮಹಿಳಾ ಯೋಗ ಸಮಿತಿಯ ಸುಮಾಪ್ರಸಾದ್‌, ಕಿಸಾನ್‌ ಸೇವಾ  ಪಂಚಾಯತ್‌ ನ ನಾಗರಾಜ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next