Advertisement

ರಕ್ತ ಬಂದ್ರೆ ಒಪ್ಪಿಕೊಳ್ಳೋಕೆ ಆಗಲ್ಲ; ಸುದೀಪ್‌ ಮಾತಿಗೆ ರಶ್ಮಿಕಾ ಪ್ರತಿಕ್ರಿಯೆ

10:54 AM Jan 21, 2023 | Team Udayavani |

ಸಿನಿಮಾಗಿಂತ ಹೆಚ್ಚಾಗಿ ವಿವಾದಗಳ ಮೂಲಕ ಸದ್ದು ಮಾಡುವ ನಟಿಯರ ಪೈಕಿ ರಶ್ಮಿಕಾ ಕೂಡ ಒಬ್ಬರು. ಬೇಕೋ, ಬೇಡವೋ ರಶ್ಮಿಕಾ ಆಡುವ ಮಾತುಗಳು ಆಗಾಗ್ಗೆ ನೆಟ್ಟಿಗರನ್ನು ಕೆರಳಿಸುವುದು, ಟ್ರೋಲ್‌ ಪ್ರಿಯರಿಗೆ ಆಹಾರವಾಗೋದು ಮಾಮೂಲಿ ಎಂಬಂತಾಗಿದೆ.  ಈಗ ರಶ್ಮಿಕಾ ಆಡಿರುವ ಅಂಥದ್ದೇ ಮಾತು ಮತ್ತೆ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Advertisement

ಇತ್ತೀಚೆಗಷ್ಟೇ ನಟ ಸುದೀಪ್‌, “ಸಾರ್ವಜನಿಕ ಜೀವನಕ್ಕೆ ಬಂದರೆ ಹೂಮಾಲೆ, ಮೊಟ್ಟೆ, ಟೊಮೆಟೋ ಮತ್ತು ಕಲ್ಲು ಯಾವಾಗಲು ನಿಮ್ಮ ಬಳಿಗೆ ಬರುತ್ತದೆ, ಹ್ಯಾಂಡಲ್‌ ಮಾಡುವುದನ್ನು ಕಲಿಯಬೇಕು’ ಎಂದು ಹೇಳಿದ್ದರು.

ಇದನ್ನೂ ಓದಿ:ಸಂತಾನಕ್ಕಾಗಿ ಸೊಸೆಗೆ ಸ್ಮಶಾನದಲ್ಲಿ ಎಲುಬಿನ ಪುಡಿ ತಿನ್ನಿಸಿದರು..; ಮಂತ್ರವಾದಿ ಸೇರಿ 7 ಜನರ ವಿರುದ್ದ ಎಫ್ಐಆರ್

ಸುದೀಪ್‌ ಅವರ ಮಾತಿಗೆ ಪ್ರತಿಕ್ರಿಯಿಸಿರುವ ರಶ್ಮಿಕಾ, “ನಾನು ಈ ಮಾತನ್ನು ಒಪ್ಪುತ್ತೇನೆ. ಏಕೆಂದರೆ ನಾವು ಸಾರ್ವಜನಿಕ ವ್ಯಕ್ತಿಗಳು. ಆದರೆ ಕಲ್ಲು ಎಸೆದು ನೋವಾದಾಗ, ರಕ್ತ ಬಂದಾಗಲೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದಿದ್ದಾರೆ.

ಸದ್ಯ ಸುದೀಪ್‌ ಅವರ ಮಾತು ಮತ್ತು ಅದಕ್ಕೆ ಕೌಂಟರ್‌ ರಿಯಾಕ್ಷನ್‌ ನಂತಿರುವ ರಶ್ಮಿಕಾ ಮಾತಿನ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next