Advertisement

ʼಪುಷ್ಪ-2ʼ ನಿಂದ ಹೊರ ಬಿದ್ದಿಲ್ಲ ರಶ್ಮಿಕಾ: ಕೊಡಗಿನ ಚೆಲುವೆ ಕೊಟ್ಟ ಅಪ್ಡೇಟ್‌ ಏನು?

03:26 PM Jan 16, 2023 | Team Udayavani |

ಮುಂಬಯಿ: ʼಕಿರಿಕ್‌ ಪಾರ್ಟಿʼ ಬೆಡಗಿ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ವರ್ಷದ ಆರಂಭದಲ್ಲೇ ʼವಾರಿಸುʼ ಮೂಲಕ ಬ್ರೇಕ್‌ ಪಡೆದುಕೊಂಡಿದ್ದಾರೆ. ವಿಶ್ವದೆಲ್ಲೆಡೆ ದಳಪತಿ ವಿಜಯ್‌ ʼವಾರಿಸುʼ ಸಖತ್‌ ಸದ್ದು ಮಾಡುತ್ತಿದೆ.

Advertisement

ಟಾಲಿವುಡ್‌ ನ ಸ್ಟೈಲಿಸ್ಟ್‌ ಸ್ಟಾರ್‌ ಅಲ್ಲು ಅರ್ಜುನ್‌ ಅವರ ʼಪುಷ್ಪʼ ಪಾರ್ಟ್‌ -1 ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ದೊಡ್ಡ ಹಿಟ್‌ ಆಗಿತ್ತು. ಶ್ರೀವಲ್ಲಿಯಾಗಿ ರಶ್ಮಿಕಾ ಪ್ರೇಕ್ಷಕರ ಮನ ಗೆದ್ದಿದ್ದರು. ಸುಕುಮಾರ್‌ ಅವರ ʼಪುಷ್ಪ-2ʼ ಸಿನಿಮಾ ಬಹು ನಿರೀಕ್ಷೆಯನ್ನು ಹುಟ್ಟಿಸಿದೆ.

ಈಗಾಗಲೇ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಇತ್ತೀಚೆಗೆ ಪುಷ್ಪ ಸೀಕ್ವೆಲ್‌ ನಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ತೆಗೆದಯ ಹಾಕಲಾಗಿದೆ ಎನ್ನುವ ಸುದ್ದಿ ಹೊರಬಿದ್ದಿತ್ತು. ಸಾಯಿ ಪಲ್ಲವಿ ರಶ್ಮಿಕಾ ಜಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ವದಂತಿ ಹಬ್ಬಿತ್ತು.

ಇದನ್ನೂ ಓದಿ: ಬೀದಿ ನಾಯಿಗೆ ಆಹಾರ ನೀಡುವ ವೇಳೆ ಯುವತಿ ಮೇಲೆ ಹರಿದ ಕಾರು: ಗಂಭೀರ

ಆದರೆ ಈ ಎಲ್ಲದಕ್ಕೂ ರಶ್ಮಿಕಾ ಅವರು ಒಂದೇ ಮಾತಿನಲ್ಲಿ ಉತ್ತರಿಸಿದ್ದಾರೆ. ಇಂಡಿಯಾ ಟುಡೇ  ಜೊತೆ ಮಾತಾನಾಡಿರುವ ಅವರು ʼಮುಂದಿನ ತಿಂಗಳು ಶೂಟಿಂಗ್‌ ನಲ್ಲಿ ಭಾಗಿಯಾಗಲಿದ್ದೇನೆ. ಪುಷ್ಪ-2 ನಲ್ಲಿ ಏನೆಲ್ಲಾ ಇದೆ ಎನ್ನುವುದನ್ನು ನೋಡಲು ತುಂಬಾ ಉತ್ಸುಕಳಾಗಿದ್ದೇನೆ” ಎಂದಿದ್ದಾರೆ.

Advertisement

ಸದ್ಯ ಸಿದ್ದಾರ್ಥ್‌ ಮಲ್ಹೋತ್ರ ಅವರೊಂದಿಗೆ ನಟಿಸಿರುವ ʼಮಿಷನ್‌ ಮಜ್ನುʼ ಸಿನಿಮಾದ ಪ್ರಚಾರದಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ. ಜ.20 ರಂದು ನೆಟ್‌ ಫ್ಲಿಕ್ಸ್‌ ನಲ್ಲಿ ಈ ಸಿನಿಮಾ ರಿಲೀಸ್‌ ಆಗಲಿದೆ.

ಇದಲ್ಲದೆ ರಶ್ಮಿಕಾ ಮಂದಣ್ಣ ಸಂಕ್ರಾಂತಿ ಹಬ್ಬಕ್ಕೆ ಶುಭಾಶಯವನ್ನು ಕೋರಿದ್ದು, ಮೊದಲು ಕನ್ನಡದಲ್ಲಿ ಹಬ್ಬದ ಶುಭಾಶಯವನ್ನು ಕೋರಿದ್ದು, ನೆಟ್ಟಿಗರು ಮತ್ತೆ ಚರ್ಚೆ ಹುಟ್ಟು ಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next