Advertisement

Rare occurrence: ಮಳೆಗಾಗಿ ಪ್ರಾರ್ಥಿಸಿ ಬಾಲಕರಿಬ್ಬರಿಗೆ ಮದುವೆ

03:25 AM Sep 30, 2024 | Team Udayavani |

ಕುಣಿಗಲ್‌ (ತುಮಕೂರು): ಮಳೆಗಾಗಿ ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳ, ಕತ್ತೆಗಳ ಮದುವೆ ಮಾಡುವುದು ಸಾಮಾನ್ಯ. ಆದರೆ, ತಾಲೂಕಿನ ಅಮೃತ್ತೂರು ಹೋಬ ಳಿಯ ಸೊಂಡೇಕೊಪ್ಪ ಗ್ರಾಮದಲ್ಲಿ ಇಬ್ಬರು ಬಾಲಕರನ್ನು ವಧು-ವರರನ್ನಾಗಿಸಿ ಮದುವೆ ಮಾಡಿಸಿ, ಜನರಿಗೆ ಭೋಜನ ವ್ಯವಸ್ಥೆ ಮಾಡಿದ ಅಪರೂಪದ ಪ್ರಸಂಗ ನಡೆದಿದೆ.

Advertisement

ಇಬ್ಬರು ಬಾಲಕರನ್ನು ವಧು-ವರರನ್ನಾಗಿ ಮಾಡಿ ಮಾಂಗಲ್ಯ ಧಾರಣೆ ಮಾಡಲಾಯಿತು. ಇಡೀ ಗ್ರಾಮದಲ್ಲಿ ಮದುವೆಯ ವಾತಾವರಣ ಸೃಷ್ಟಿಯಾಗಿತ್ತು. ಮದುವೆಗಾಗಿ ಬಂಧು-ಬಳಗ ಸ್ನೇಹಿತರು ಭಾಗವಹಿಸಿದ್ದರು. ಗ್ರಾಮಸ್ಥರು ವಧು-ವರರಿಗೆ ಅಕ್ಷತೆ ಹಾಕಿ, ಶುಭ ಹಾರೈಸಿದರು.

ಈ ವೇಳೆ ವಾದ್ಯಗೋಷ್ಠಿ ಮೊಳಗಿತು. ಅನಂತರ ವಧು-ವರರನ್ನು ಗ್ರಾಮಸ್ಥರು ಮೆರವಣಿಗೆ ನಡೆಸಿ ಮಳೆಗಾಗಿ ಪ್ರಾರ್ಥಿಸಿದರು. ಕಾಕಾತಾಳೀಯವೇನೋ ಎಂಬಂತೆ ಸೊಂಡೇಕೊಪ್ಪ ಸೇರಿದಂತೆ ಅಮೃತ್ತೂರು ಹೋಬಳಿಯ ಕೆಲವು ಭಾಗಗಳಲ್ಲಿ ಶನಿವಾರ ತಡರಾತ್ರಿ ಜೋರಾಗಿ ಮಳೆ ಸುರಿಯಿತು. ಗ್ರಾಮದ ಜನರು ಸಂತಸಪಟ್ಟರು. ರವಿವಾರ ಸಂಜೆ ಕುಣಿಗಲ್‌ನಲ್ಲಿ ಸ್ವಲ್ಪ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next