Advertisement

ರಣಜಿ ಟ್ರೋಫಿ: ಜೈಸ್ವಾಲ್‌ ಶತಕ; ಉತ್ತಮ ಸ್ಥಿತಿಯಲ್ಲಿ ಮುಂಬಯಿ

11:11 PM Jun 14, 2022 | Team Udayavani |

ಬೆಂಗಳೂರು: ಎಡಗೈ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ ಅವರ ಜವಾಬ್ದಾರಿಯ ಶತಕದಿಂದಾಗಿ ಮುಂಬಯಿ ತಂಡವು ಉತ್ತರ ಪ್ರದೇಶ ತಂಡದೆದುರಿನ ರಣಜಿ ಟ್ರೋಫಿ ಕೂಟದ ಸೆಮಿಫೈನಲ್‌ ಪಂದ್ಯದಲ್ಲಿ 5 ವಿಕೆಟಿಗೆ 260 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿದೆ.

Advertisement

ಬಹಳಷ್ಟು ಆತ್ಮವಿಶ್ವಾಸದಲ್ಲಿರುವ ಜೈಸ್ವಾಲ್‌ ಉತ್ತರ ಪ್ರದೇಶ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ತಾಳ್ಮೆಯ ಆಟವಾಡಿ ಕುಸಿತ ಮುಂಬಯಿ ತಂಡವನ್ನು ಸುಸ್ಥಿತಿಗೆ ತಲುಪಿಸಿದರು. 227 ಎಸೆತ ಎದುರಿಸಿದ ಅವರು 15 ಬೌಂಡರಿ ನೆರವಿನಿಂದ 100 ರನ್‌ ಹೊಡೆದು ಸಂಭ್ರಮಿಸಿದರು. ಜೈಸ್ವಾಲ್‌ ಈ ಮೊದಲು ಉತ್ತರಖಂಡ ತಂಡದೆದುರಿನ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲೂ ತನ್ನ ಚೊಚ್ಚಲ ಶತಕ ದಾಖಲಿಸಿದ್ದರು.

ಬ್ಯಾಟಿಂಗಿಗೆ ಇಳಿಸಲ್ಪಟ್ಟ 44 ಬಾರಿಯ ಚಾಂಪಿಯನ್‌ ಮುಂಬಯಿ ತಂಡವು ಆರಂಭಿಕ ಕುಸಿತಕ್ಕೆ ಒಳಗಾಯಿತು. ಮೊದಲ ಓವರಿನಲ್ಲಿಯೇ ತಂಡ ನಾಯಕ ಪೃಥ್ವಿ ಶಾ ಅವರನ್ನು ಶೂನ್ಯಕ್ಕೆ ಕಳೆದುಕೊಂಡಿತು. ಅವರು ಯಶ್‌ ದಯಾಳ್‌ ಅವರ ಮೊದಲ ಬಲಿಯಾಗಿದ್ದರು.

ಜೈಸ್ವಾಲ್‌ ಮತ್ತು ಸುವೇದ್‌ ಪಾರ್ಕರ್‌ ಮೂರನೇ ವಿಕೆಟಿಗೆ 63 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡವನ್ನು ಆಧರಿಸಿದರು. ಪಾರ್ಕರ್‌ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಚೊಚ್ಚಲ ದ್ವಿಶತಕ ಬಾರಿಸಿದ್ದರು.
ಸಂಕ್ಷಿಪ್ತ ಸ್ಕೋರು: ಮುಂಬಯಿ ಮೊದಲ ಇನ್ನಿಂಗ್ಸ್‌ 5 ವಿಕೆಟಿಗೆ 260 (ಯಶಸ್ವಿ ಜೈಸ್ವಾಲ್‌ 100, ಹಾರ್ದಿಕ್‌ ತಾಮೋರೆ 51 ಬ್ಯಾಟಿಂಗ್‌, ಸಫ‌ìರಾಜ್‌ ಖಾನ್‌ 40, ಸುವೇದ್‌ ಪಾರ್ಕರ್‌ 32, ಯಶ್‌ ದಯಾಳ್‌ 35ಕ್ಕೆ 2, ಕರಣ್‌ ಶರ್ಮ 30ಕ್ಕೆ 2).

ಮಧ್ಯಪ್ರದೇಶ 6 ವಿಕೆಟಿಗೆ 271
ಆಲೂರು (ಬೆಂಗಳೂರು): ರಣಜಿ ಟ್ರೋಫಿ ಕ್ರಿಕೆಟ್‌ ಕೂಟದ ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ಮಧ್ಯಪ್ರದೇಶ ತಂಡವು ಬಂಗಾಲ ವಿರುದ್ಧ ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟಿಗೆ 271 ರನ್‌ ಗಳಿಸಿದೆ.

Advertisement

ಆರಂಭಿಕ ಹಿಮಾಂಶು ಮಂತ್ರಿ ಅವರ ಅಜೇಯ ಶತಕ ಮತ್ತು ಅಕ್ಷತ್‌ ರಘುವಂಶಿ ಅವರ ಅರ್ಧಶತಕದಿಂದಾಗಿ ಮಧ್ಯಪ್ರದೇಶ ಉತ್ತಮ ಮೊತ್ತ ಪೇರಿಸುವಂತಾಯಿತು. 280 ಎಸೆತ ಎದುರಿಸಿದ ಮಂತ್ರಿ 134 ರನ್‌ ಗಳಿಸಿ ಆಡುತ್ತಿದ್ದರೆ.

ಸಂಕ್ಷಿಪ್ತ ಸ್ಕೋರು: ಮಧ್ಯಪ್ರದೇಶ ಪ್ರಥಮ ಇನ್ನಿಂಗ್ಸ್‌ 6 ವಿಕೆಟಿಗೆ 271 (ಹಿಮಾಂಶು ಮಂತ್ರಿ 134 ಬ್ಯಾಟಿಂಗ್‌, ಅಕ್ಷತ್‌ ರಘುವಂಶಿ 63, ಮುಕೇಶ್‌ ಕುಮಾರ್‌ 45ಕ್ಕೆ 2, ಆಕಾಶ್‌ದೀಪ್‌ 55ಕ್ಕೆ 2)

Advertisement

Udayavani is now on Telegram. Click here to join our channel and stay updated with the latest news.

Next