Advertisement

ರಣಜಿ ಟ್ರೋಫಿ: ಕೇರಳಕ್ಕೆ ಸಚಿನ್‌ ಬೇಬಿ ನೆರವು

12:04 AM Jan 18, 2023 | Team Udayavani |

ತಿರುವನಂತಪುರ: ನಾಯಕ ಸಚಿನ್‌ ಬೇಬಿ ಅವರ ಆಕರ್ಷಕ ಶತಕದಿಂದಾಗಿ ಕೇರಳ ತಂಡವು ರಣಜಿ ಟ್ರೋಫಿ ಕ್ರಿಕೆಟ್‌ ಕೂಟದ ಪಂದ್ಯದಲ್ಲಿ ಕರ್ನಾಟಕ ಎದುರು ಆರಂಭಿಕ ಕುಸಿತದಿಂದ ಚೇತರಿಸಿಕೊಂಡಿದೆ. ದಿನದಾಟದ ಅಂತ್ಯಕ್ಕೆ ಕೇರಳವು ಆರು ವಿಕೆಟಿಗೆ 224 ರನ್‌ ಗಳಿಸಿ ಸುಸ್ಥಿತಿಯಲ್ಲಿದೆ.

Advertisement

ಟಾಸ್‌ ಗೆದ್ದು ಬ್ಯಾಟಿಂಗ್‌ ನಡೆಸಿದ ಕೇರಳ ಆರಂಭದಲ್ಲಿ ಕುಸಿಯಿತು. ಆರು ರನ್‌ ಗಳಿಸುವಷ್ಟರಲ್ಲಿ ಮೂರು ವಿಕೆಟ್‌ ಕಳೆದುಕೊಂಡಿತ್ತು. ಆ ಬಳಿಕ ಸಚಿನ್‌ ಬೇಬಿ ಮತ್ತು ವತ್ಸಲ್‌ ಗೋವಿಂದ್‌ ಉತ್ತಮವಾಗಿ ತಂಡವನ್ನು ಆಧರಿಸಿದರು. ಸಚಿನ್‌ 116 ರನ್‌ ಗಳಿಸಿದ್ದರೆ ಗೋವಿಂದ್‌ 46 ರನ್‌ ಹೊಡೆದರು. ಅವರಿಬ್ಬರು 120 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡವನ್ನು ಆಧರಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next