Advertisement
“ತುಂಬಾ ಖುಷಿಯಾಗುತ್ತಿದೆ. ಯಾವುದೇ ಮ್ಯೂಟ್, ಕಟ್ಸ್ ಇಲ್ಲದೇ “ಯು/ಎ’ ಪ್ರಮಾಣ ಪತ್ರ ಸಿಕ್ಕಿದೆ’ ಎಂದು ಖುಷಿಯಾದರು. ಇದು ತಮಿಳಿನ “ಪೂಜೈ’ ಚಿತ್ರದ ರೀಮೇಕ್. ಹಾಗಂತ ಯಥಾವತ್ ರೀಮೇಕ್ ಮಾಡಿಲ್ಲವಂತೆ. ಸಾಕಷ್ಟು ಬದಲಾವಣೆ ಮಾಡಿಕೊಂಡು ಮಾಡಿದ್ದಾಗಿ ಹೇಳುತ್ತಾರೆ ಹರ್ಷ. ಇನ್ನು, ಪುನೀತ್ ಅವರ ಒಡನಾಟ ಚಿತ್ರರಂಗಕ್ಕೆ ಬರುವ ಮುಂಚೆಯೇ ಇದ್ದರೂ ಅವರಿಗೆ ಸಿನಿಮಾ ನಿರ್ದೇಶನ ಮಾಡುವ ಅವಕಾಶ ಸಿಕ್ಕಿರಲಿಲ್ಲವಂತೆ. ಈಗ “ಅಂಜನಿಪುತ್ರ’ ಮೂಲಕ ಸಿಕ್ಕಿದೆ. ಈ ಚಿತ್ರವನ್ನು ಎಂ.ಎನ್.ಕುಮಾರ್ ನಿರ್ಮಿಸಿದ್ದಾರೆ. ಎಂ.ಎನ್.ಕುಮಾರ್ ಹಾಗೂ ಹರ್ಷ ಅವರ ಚಿತ್ರರಂಗದ ಸಂಬಂಧಕ್ಕೆ ಒಂದು ಇತಿಹಾಸವಿದೆಯಂತೆ. ಹರ್ಷ ನೃತ್ಯ ನಿರ್ದೇಶಕರಾಗಿದ್ದು “ರಂಗ ಎಸ್ಎಸ್ಎಲ್ಸಿ’ ಸಿನಿಮಾ ಮೂಲಕ. ಈ ಸಿನಿಮಾವನ್ನು ಎಂ.ಎನ್.ಕುಮಾರ್ ನಿರ್ಮಿಸಿದ್ದರು. ಇನ್ನು, ಹರ್ಷ ನಟರಾಗಿದ್ದು “ಕಾಶಿ’ ಚಿತ್ರದಲ್ಲಿ. ಅದರ ನಿರ್ಮಾಣ ಕೂಡಾ ಕುಮಾರ್ ಅವರದು. ಹರ್ಷ ಮೊದಲ ಬಾರಿಗೆ ನಿರ್ದೇಶಿಸಿದ “ಗೆಳೆಯ’ ಚಿತ್ರವನ್ನು ನಿರ್ಮಿಸಿದ್ದು ಕೂಡಾ ಎಂ.ಎನ್. ಕುಮಾರ್. ಈಗ ಅವರಿಬ್ಬರ ಕಾಂಬಿನೇಶನ್ನಲ್ಲಿ “ಅಂಜನಿಪುತ್ರ’ ಬರುತ್ತಿದೆ.
ಚಿತ್ರದ ನಿರ್ಮಾಪಕ ಎಂ.ಎನ್.ಕುಮಾರ್ ಚಿತ್ರವನ್ನು 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಹೊರರಾಜ್ಯ ಹಾಗೂ ಹೊರದೇಶಗಳಲ್ಲೂ “ಅಂಜನಿಪುತ್ರ’ ತೆರೆಕಾಣಲಿದೆ ಎಂದರು. ಸಂಗೀತ ನಿರ್ದೇಶಕ ರವಿ ಬಸೂÅರು ಪ್ರತಿಭೆಯನ್ನು ಗುರುತಿಸಿ ಅವಕಾಶ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಹೇಳಿದರು.
Related Articles
Advertisement