Advertisement

ಬಿಜೆಪಿ ಮುಳುಗುತ್ತಿರುವ ಹಡಗು: ಸುರ್ಜೇವಾಲಾ

11:39 PM Mar 10, 2023 | Team Udayavani |

ಶಿವಮೊಗ್ಗ: ಯಾರು ಪಕ್ಷ ಬದಲಿಸುತ್ತಾರೆ ಎಂಬುದರ ಬಗ್ಗೆ ನಾನು ಮಾತಾಡಲ್ಲ. ಆದರೆ ಬಿಜೆಪಿ ಮಾತ್ರ ಮುಳುಗುತ್ತಿರುವ ಹಡಗು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಲತಾ ಬಿಜೆಪಿ ಸೇರ್ಪಡೆ ಬಗ್ಗೆ ನನಗೆ ಗೊತ್ತಿಲ್ಲ. ಯಾರ್ಯಾರು ಎಲ್ಲೆಲ್ಲಿ ಪಕ್ಷ ಬದಲಾಯಿಸುತ್ತಾರೆ ಎಂಬುದು ನಮಗೆ ಗೊತ್ತಿಲ್ಲ. ಅದೆಲ್ಲಾ ಅವರ ವೈಯಕ್ತಿಕ ವಿಷಯ. ನಾವು ಅದಕ್ಕೆ ಕಮೆಂಟ್‌ ಮಾಡಲು ಸಾಧ್ಯವಿಲ್ಲ. ಬಿಜೆಪಿ ಮುಳುಗುತ್ತಿರುವ ಹಡಗು. ಪ್ರತೀದಿನ ಮುಳುಗುತ್ತಲೇ ಇರುತ್ತದೆ. ಎಂಎಲ್‌ಎ ಎಚ್‌. ನಾಗೇಶ್‌ ಬಿಟ್ಟರು. ಎಂಎಲ್‌ಸಿ ಪುಟ್ಟಣ್ಣ ಬಿಟ್ಟರು. ಬಿಜೆಪಿ ಹಡಗು ನಿಧಾನವಾಗಿ ಮುಳುಗುತ್ತಿದೆ. ಈ ಹಡಗು ಬೇಡ ಎನ್ನುವವರು ಬಿಡಬಹುದು ಎಂದರು.

ರಾಜ್ಯದಲ್ಲಿ ಭ್ರಷ್ಟಾಚಾರಗಳ ಸರಮಾಲೆಯೇ ಇದೆ. ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಮಾಡಿಕೊಂಡರು. ಈಶ್ವರಪ್ಪ ವಿರುದ್ಧ ಆರೋಪ ಇತ್ತು. ಕಾಂಟ್ರಾಕ್ಟರ್‌ ಅಸೋಸಿಯೇಷನ್‌ ಅಧ್ಯಕ್ಷ ಕೆಂಪಣ್ಣ ಸಾಕಷ್ಟು ಸಲ ಹೇಳಿದರು. ಶೀಘ್ರದಲ್ಲೇ ಅಭ್ಯರ್ಥಿಗಳ ಘೋಷಣೆ ಆಗಲಿದೆ. ಸೋನಿಯಾ, ರಾಹುಲ್‌ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಜತೆ ಸೇರಿ ಚರ್ಚೆ ಮಾಡಿ ಟಿಕೆಟ್‌ ಘೋಷಣೆ ಮಾಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next