Advertisement

ವಿದರ್ಭ ವಿಜಯ; ಕೇರಳ ಔಟ್‌

12:30 AM Jan 26, 2019 | Team Udayavani |

ವಯನಾಡ್‌: ಇದೇ ಮೊದಲ ಸಲ ರಣಜಿ ಟ್ರೋಫಿ ಸೆಮಿಫೈನಲ್‌ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಕೇರಳ, ಕೇವಲ ಒಂದೂವರೆ ದಿನದಲ್ಲೇ ಸೋತು ಹೊರಬಿದ್ದಿದೆ. ತವರಿನ ವಯನಾಡ್‌ನ‌ಲ್ಲಿ ಹಾಲಿ ಚಾಂಪಿಯನ್‌ ವಿದರ್ಭ ವಿರುದ್ಧ ನಡೆದ ಪಂದ್ಯವನ್ನು ಕೇರಳ ಇನ್ನಿಂಗ್ಸ್‌ ಹಾಗೂ 11 ರನ್‌ ಅಂತರ ದಿಂದ ಕಳೆದುಕೊಂಡು ತೀವ್ರ ನಿರಾಶೆ ಅನುಭವಿಸಿತು.

Advertisement

ಕೇರಳದ 106 ರನ್ನಿಗೆ ಜವಾಬು ನೀಡಿದ ವಿದರ್ಭ 208 ರನ್‌ ಗಳಿಸಿತು. 102 ರನ್ನುಗಳ ಹಿನ್ನಡೆಗೆ ಸಿಲುಕಿದ ಕೇರಳ ದ್ವಿತೀಯ ಇನ್ನಿಂಗ್ಸ್‌ ನಲ್ಲೂ ಉಮೇಶ್‌ ಯಾದವ್‌ ದಾಳಿಗೆ ತತ್ತರಿಸಿ 91 ರನ್ನಿಗೆ ದಿಂಡು ರುಳಿತು. ಯಾದವ್‌ ಸಾಧನೆ 31ಕ್ಕೆ 5 ವಿಕೆಟ್‌. 4 ವಿಕೆಟ್‌ ಯಶ್‌ ಠಾಕೂರ್‌ ಪಾಲಾಯಿತು. ಮೊದಲ ಸರದಿಯಲ್ಲಿ ಉಮೇಶ್‌ ಯಾದವ್‌ 48 ರನ್ನಿಗೆ 7 ವಿಕೆಟ್‌ ಉಡಾಯಿಸಿದ್ದರು. ದ್ವಿತೀಯ ದಿನದ ಭೋಜನ ವಿರಾ ಮ ಮುಗಿದು ಸ್ವಲ್ಪ ಹೊತ್ತಿನಲ್ಲೇ ಈ ಪಂದ್ಯ ಕೊನೆಗೊಂಡಿತು. 

ಸಂಕ್ಷಿಪ್ತ ಸ್ಕೋರ್‌: ಕೇರಳ-106 ಮತ್ತು 91 (ಅರುಣ್‌ ಕಾರ್ತಿಕ್‌ 36, ಉಮೇಶ್‌ ಯಾದವ್‌ 31ಕ್ಕೆ 5, ಯಶ್‌ ಠಾಕೂರ್‌ 28ಕ್ಕೆ 4). ವಿದರ್ಭ-208 (ಫೈಜ್‌ ಫ‌ಜಲ್‌ 75, ವಾಸಿಮ್‌ ಜಾಫ‌ರ್‌ 34, ಸಂದೀಪ್‌ ವಾರಿಯರ್‌ 57ಕ್ಕೆ 5, ಬಾಸಿಲ್‌ ಥಂಪಿ 64ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next