Advertisement

ವಿಜಯಪುರ: ಸಂಭ್ರಮದ ರಂಜಾನ್ ಆಚರಣೆ

01:50 PM Apr 22, 2023 | Kavyashree |

ವಿಜಯಪುರ: ರಂಜಾನ್ ಹಬ್ಬದ ಪ್ರಯುಕ್ತ ಜಿಲ್ಲೆಯ ನಾಲತವಾಡ ಪಟ್ಟಣದ ಜಾಮೀಯಾ ಮಸೀದಿಯಲ್ಲಿ ಅಲ್ಪಸಂಖ್ಯಾತರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.

Advertisement

ಸಮಾಜದ ಸಾವಿರಾರು ಮುಸ್ಲಿಂ ಬಾಂದವರು ಕೂಡಿಕೊಂಡು ಗಣಪತಿ ಚೌಕ ಮಾರ್ಗವಾಗಿ ಬಸವೇಶ್ವರ ಸರ್ಕಲ್ ಹಾಗೂ ಶ್ರೀ ಶರಣ ವೀರೇಶ್ವರ ಸರ್ಕಲ್ ಮಾರ್ಗವಾಗಿ ನಾರಾಯಣಪುರ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.‌

ಈ ವೇಳೆ ನಾಲತವಾಡ ಪಟ್ಟಣದ ಮುಸ್ಲಿಂ ಬಾಂದವರು, ಹಳ್ಳಿಗಳಿಂದ ಬಂದ ಮುಸ್ಲಿಂ ಬಾಂದವರು ಇದ್ದರು.

ಇದೇ ವೇಳೆ  ಪ್ರಾರ್ಥನೆ ನಂತರ ಪರಸ್ಪರ ತಬ್ಬಿಕೊಂಡು ಶುಭಾಶಯ ಕೋರಿದರು. ಅಗಲಿದ ಜೀವಿಗಳ‌ ಸಮಾಧಿಗೆ ಆತ್ಮ‌ಶಾಂತಿಗೆ, ಪ್ರಾರ್ಥನೆ ಸಲ್ಲಿಸಿದರು. ವಾಡಿಕೆಯಂತೆ ಧಣಿಗಳಾದ ನಾಡಗೌಡ ಹಾಗೂ ದೇಶಮುಖ ನಿವಾಸಕ್ಕೆ ತೆರಳಿದ ಮುಸ್ಲಿಂ ಸಹೋದರರು ಧಣಿಗಳಿಂದ ಶುಭಾಶಯ ಸ್ವೀಕರಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next