Advertisement

Bengaluru Rameshwaram Cafe: ಶಂಕಿತ ಬಸ್ಸ‌ಲ್ಲಿ ಸಂಚರಿಸಿದ ದೃಶ್ಯ ರಿಲೀಸ್‌

11:32 AM Mar 09, 2024 | Team Udayavani |

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಮಹತ್ವದ ಸುಳಿವು ಸಂಗ್ರಹಿಸಿರುವ ಎನ್‌ಐಎ ಅಧಿಕಾರಿ ಗಳು, ಶಂಕಿತ ಸಂಚರಿಸಿರುವ ಬಿಎಂಟಿಸಿ ಬಸ್‌ನ ಒಳಭಾಗದ ಸಿಸಿ ಕ್ಯಾಮೆರಾ ಮತ್ತು ಬಳ್ಳಾರಿಯ ಬ್ರೂಸ್‌ಪೇಟೆ ಠಾಣೆ ವ್ಯಾಪ್ತಿಯ ಬಸ್‌ ನಿಲ್ದಾಣದಲ್ಲಿರುವ ಸಂಚರಿಸಿರುವ ಸಿಸಿ ಕ್ಯಾಮೆರಾ ದೃಶ್ಯ ಬಿಡುಗಡೆ ಮಾಡಿ, ಶಂಕಿತನ ಪತ್ತೆಗೆ ಸಾರ್ವಜನಿಕರ ಮೊರೆ ಹೋಗಿದ್ದಾರೆ.

Advertisement

ಮಾ.1ರಂದು ಮಧ್ಯಾಹ್ನ 2 ಗಂಟೆ 4 ನಿಮಿಷಕ್ಕೆ ಕೆಎ-57,ಎಫ್-4233 ನಂಬರ್‌ನ ಬಸ್‌ ಹತ್ತಿರುವ ಶಂಕಿತ ಮಧ್ಯಾಹ್ನ 3 ಗಂಟೆ 40 ನಿಮಿಷಕ್ಕೆ ಬಸ್‌ನಿಂದ ಇಳಿದಿದ್ದಾನೆ. ಆ ನಂತರ ಬಳ್ಳಾರಿ ಬ್ರೂಸ್‌ ಪೇಟೆ ಠಾಣೆ ವ್ಯಾಪ್ತಿಯ ಬಸ್‌ ನಿಲ್ದಾಣದಲ್ಲಿ ರಾತ್ರಿ 9 ಗಂಟೆ 1 ನಿಮಿಷಕ್ಕೆ ಕಾಣಿಸಿ ಕೊಂಡಿದ್ದಾನೆ. ಹೀಗಾಗಿ ಈ ವಿಡಿಯೋಗಳನ್ನು ಎನ್‌ಐಎ ತನ್ನ ಎಕ್ಸ್‌ ಖಾತೆಯಲ್ಲಿ ಪ್ರಕಟಿಸಿ ಆರೋಪಿಯ ಬಗ್ಗೆ ಮಾಹಿತಿ ನೀಡುವಂತೆ ಕೋರಿದೆ.

ಮತ್ತೂಂದೆಡೆ ಬಳ್ಳಾರಿಯಿಂದ ಶಂಕಿತ ಭಟ್ಕಳ, ಆ ನಂತರ ಬಂಟ್ವಾಳ ಕಡೆ ಹೋಗಿದ್ದಾನೆ ಎಂಬ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next