Advertisement

 ದಲಿತ ಸಿಎಂ ಅದೃಷ್ಟವಿದ್ದರೆ ಯಾರೂ ತಡೆಯಲಾಗದು: ರಮೇಶ ಜಿಗಜಿಣಗಿ

03:27 PM Dec 29, 2022 | Team Udayavani |

ವಿಜಯಪುರ: ರಾಜ್ಯದಲ್ಲಿ ದಲಿತ ಸಿಎಂ‌ ಆಗುವ ಅವಕಾಶದ ಅದೃಷ್ಟವಿದ್ದಲ್ಲಿ ಯಾರೂ ತಡೆಯಲಾಗದು ಎಂದು ಪುನರುಚ್ಚರಿಸಿರುವ ಹಿರಿಯ ಸಂಸದ ರಮೇಶ ಜಿಗಜಿಣಗಿ, ನಾನು ಎಂದೂ ಕಾಂಗ್ರೆಸ್ ಸೇರುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜು ದಿನದಿಂದ, ನನಗೆ ರಾಜಕೀಯ ಪ್ರಜ್ಞೆ ಬಂದಾಗಿನಿಂದ ಕಾಂಗ್ರೆಸ್ ವಿರೋಧಿ ರಾಜಕೀಯ ಮಾಡುತ್ತ ಬಂದಿದ್ದೇನೆ. ಹೀಗಾಗಿ ಕಾಂಗ್ರೆಸ್ ಸೇರುವ ಪರಿಸ್ಥಿತಿ ಉದ್ಭವಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮಾಡಿರುವ ದ್ರೋಹದ ಬಗ್ಗೆ ಅರಿತ ಯಾವೊಬ್ಬ ದಲಿತರೂ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕರು. ಹಿಂದೆಲ್ಲ ಅಕ್ಷರ ಜ್ಞಾನ ಇಲ್ಲದ ಮುಗ್ದ ದಲಿತರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತಿದ್ದರು. ಸ್ವಯಂ ನಾನೇ ಜನತಾ ಪಕ್ಷದಿಂದ ಸ್ಪರ್ಧಿಸಿದಾಗ ನನ್ನ ತಾಯಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಳು. ಆದರೆ ದಲಿತರಲ್ಲಿ ಇದೀಗ ರಾಜಕೀಯ ಜಾಗೃತಿ ಮೂಡಿದೆ. ಓದಿಕೊಂಡಿರುವ ದಲಿತರ ಎದುರು ಕಾಂಗ್ರೆಸ್ ಮೋಸದ ಕಥೆ, ಕುತಂತ್ರದ ಆಟ ನಡೆಯುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇಂಥ ಸ್ಥಿತಿಯಲ್ಲಿ 45 ವರ್ಷ ಕಾಂಗ್ರೆಸ್ ವಿರೋಧಿ ರಾಜಕಾರಣ ಮಾಡುತ್ತ ಬಂದಿರುವ ನಾನು ರಾಜಕೀಯ ಸಂಧ್ಯಾ ಕಾಲದಲ್ಲಿ ಕಾಂಗ್ರೆಸ್ ಸೇರುವ ಯೋಚನೆಯನ್ನೂ ಮಾಡಲಾಗದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next