Advertisement

ದಲಿತ ಸಿ.ಎಂ ವಿಚಾರದಲ್ಲಿ ಬಂದ್ರೆ ಚಾರಾಣೆ, ಹೋದ್ರೆ ಬಾರಾಣೆ: ರಮೇಶ ಜಿಗಜಿಣಗಿ

03:50 PM Feb 06, 2023 | keerthan |

ವಿಜಯಪುರ: ದಲಿತ ಸಿ.ಎಂ. ವಿಷಯದಲ್ಲಿ ನಾನು ಸಾಯುವವರೆಗೂ ಬಯಸುತ್ತಲೇ ಇರುತ್ತೇನೆ. ಆದರೆ ನನಗೇ ಬೇಕೆಂಬ ಆಸೆ ಇಟ್ಟಿಲ್ಲ, ಯಾವುದೇ ಅಧಿಕಾರದ ಹಿಂದೆ ಬಿದ್ದಿಲ್ಲ. ದೇವರೂ ನನ್ನ‌ ಕೈಬಿಟ್ಟಿಲ್ಲ. ಬರುವುದಿದ್ದರೆ ತಾನೇ ಬರುತ್ತದೆ. ಬಂದ್ರೆ ಚಾರಣೆ, ಹೋದ್ರೆ ಬಾರಾಣೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದರು.

Advertisement

ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯಾವ ಚೆಲುವ ಏನೇ ಮಾಡಿದರೂ ನನಗೆ ಏನೂ ಆಗಲ್ಲ. ದೇವರ ರಕ್ಷಣೆ ನನಗಿದೆ ಎಂದರು.

ದೇವರು ನನಗೆ ಆನೆಯಂಥಹ ಶಕ್ತಿಕೊಟ್ಟಿದ್ದರೂ ಇರುವೆಯಂತೆ ದುಡಿಯುತ್ತಿದ್ದೇನೆ. ಬಸವನಾಡಿನ ನಾನು ಬಸವೇಶ್ವರ ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ವಚನ ಸಾರದಂತೆ ಜೀವನ ನಡೆಸಿದ್ದೇನೆ ಎಂದರು.

ಇದನ್ನೂ ಓದಿ:ಭಾರತ ತಂಡವನ್ನು ತೆಗೆದು ಹಾಕಿ..: ಐಸಿಸಿಗೆ ಪಾಕ್ ದಿಗ್ಗಜನ ಮನವಿ

ಕುಮಾರಸ್ವಾಮಿ, ದೇವೇಗೌಡ ಮಾತ್ರವಲ್ಲ, ಯಾವನೂ ಯಾವುದೇ ಜಾತಿಯ ಬಗ್ಗೆ ನಿಂದನೆ ಮಾಡಬಾರದು ಎಂದು ಎಚ್.ಡಿ.ಕೆ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.

Advertisement

ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿರುವ ಕುಮಾರಸ್ವಾಮಿ ಬಾಯಲ್ಲಿ ಬ್ರಾಹ್ಮಣರನ್ನು ಸಿ.ಎಂ ಮಾಡುವ ಹುನ್ನಾರ ನಡೆಯುತ್ತಿದೆ ಎಂಬ ಜಾತಿ ನಿಂದನೆ ಮಾತು ನಿರೀಕ್ಷಿತವಲ್ಲ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next