Advertisement

ವರಿಷ್ಠರ ಆಶೀರ್ವಾದ ಇಲ್ಲದಿದ್ದರೆ ನನ್ನನ್ನು ಮುಗಿಸಿ ಬಿಡುತ್ತಿದ್ದರು: ಜಾರಕಿಹೊಳಿ ಹೊಸ ಬಾಂಬ್

05:21 PM Dec 01, 2021 | Team Udayavani |

ಬೆಳಗಾವಿ: “ನನಗೆ ಬಿಜೆಪಿ ವರಿಷ್ಠರ ಆಶೀರ್ವಾದ ಮತ್ತು ಬೆಂಬಲ ಇದೆ. ಇಲ್ಲದಿದ್ದರೆ ಇಷ್ಟೊತ್ತಿಗೆ ನನ್ನನ್ನು ಮುಗಿಸಿ ಬಿಡುತ್ತಿದ್ದರು” ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದರು.

Advertisement

ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, “ಬಿಜೆಪಿ ಮತ್ತು ಅರ್ ಎಸ್ಎಸ್ ನಾಯಕರ ಆಶೀರ್ವಾದ ನನಗೆ ಇದೆ. ಹೀಗಾಗಿ ನಾನು ಧೈರ್ಯವಾಗಿ ಇದ್ದೇನೆ. ಇಲ್ಲದಿದ್ದರೆ ಷಡ್ಯಂತ್ರ ಮಾಡಿ ನನ್ನನ್ನು ಮುಗಿಸಿ ಬಿಡುತ್ತಿದ್ದರು” ಎಂದು ಹೇಳಿದರು.

ಇದನ್ನೂ ಓದಿ:ಶ್ರೀರಾಮನ ಮೊಮ್ಮಕ್ಕಳೆಂದು ಹೇಳಿಕೊಳ್ಳಲು ನಾಚಿಕೆಯಾಗಲ್ವಾ: BJP ವಿರುದ್ಧ ಧ್ರುವನಾರಾಯಣ ಕಿಡಿ

ತಮ್ಮ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಟೀಕೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ಈಗ ಯಾವುದೇ ಉತ್ತರ ಕೊಡುವದಿಲ್ಲ. ಡಿಸೆಂಬರ್ 14 ರಂದು ಎಲ್ಲ ವಿವರ ನೀಡುತ್ತೇನೆ. 1985 ರಿಂದ ಹಿಡಿದು ಇಲ್ಲಿಯವರೆಗೆ ನಾನು ಮತ್ತು ನಮ್ಮ ಕುಟುಂಬ ಹಾಗೂ ಶಿವಕುಮಾರ ಮತ್ತು ಅವರ ಕುಟುಂಬ ಹೇಗಿತ್ತು ಎಂಬುದರ ಬಗ್ಗೆ ವಿವರವಾಗಿ ಹೇಳುತ್ತೇನೆ. ನಮ್ಮಿಬ್ಬರ ಮಧ್ಯೆ ಯುದ್ಧವೇ ನಡೆಯಲಿ” ಎಂದು ಕಟುವಾಗಿ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next