Advertisement

ರೆಸಾರ್ಟ್‌ ವಾಸ್ತವ್ಯ ಮತ್ತೆ ಶುರು ; ಗೋವಾದಲ್ಲಿ ರಮೇಶ್‌ ಜಾರಕಿಹೊಳಿ

02:55 PM May 26, 2019 | Vishnu Das |

ಬೆಂಗಳೂರು: ಆಪರೇಷನ್‌ ಕಮಲದ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ರೆಸಾರ್ಟ್‌ ರಾಜಕೀಯ ಮತ್ತೆ ಆರಂಭವಾಗಿದೆ. ಕಾಂಗ್ರೆಸ್‌ ಬಂಡಾಯ ಶಾಸಕ ರಮೇಶ್‌ ಜಾರಕಿಹೊಳಿ ಅವರು ಗೋವಾದ ರೇಸಾರ್ಟ್‌ನಲ್ಲಿ ಇರುವುದಾಗಿ ವರದಿಯಾಗಿದ್ದು ಮೈತ್ರಿ ಸರ್ಕಾರದಲ್ಲಿ ನಡುಕ ತಂದಿದೆ.

Advertisement

ದೆಹಲಿಗೆ ತೆರಳಿ ಗೋವಾಕ್ಕೆ ಬಂದಿಳಿದಿರುವ ರಮೇಶ್‌ ಜಾರಕಿಹೊಳಿ ಪೋರ್ಟ್‌ ಆಗೋಡಾದ ಐಷಾರಾಮಿ ರೆಸಾರ್ಟ್‌ವೊಂದರಲ್ಲಿ ಉಳಿದುಕೊಂಡಿದ್ದು ಇನ್ನೂ ಕೆಲ ರೂಮ್‌ಗಳನ್ನು ಬುಕ್‌ ಮಾಡಲಾಗಿರುವ ಬಗ್ಗೆ ವರದಿಯಾಗಿದ್ದುಇನ್ನೂ ಕೆಲ ಅಸಮಾಧಾನಿತ ಶಾಸಕರು ತೆರಳುವ ಸಾಧ್ಯತೆಗಳಬಗ್ಗೆ ಹೇಳಲಾಗಿದೆ.

ಒಂದೆಡೆ ಕಾಂಗ್ರೆಸ್‌ ಶಾಸಕರಮೇಲೆ ಹದ್ದಿನ ಕಣ್ಣು ಇರಿಸಿದ್ದು, ಪಕ್ಷ ತೊರೆಯದಹಾಗೆ ಶತ ಪ್ರಯತ್ನ ಮಾಡುತ್ತಿದೆ. ಈಗಾಗಲೆ ಹಲವು ಶಾಸಕರು ಚುನಾವಣಾ ಸೋಲಿನ ಬಳಿಕ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಕಾಂಗ್ರೆಸ್‌ನಲ್ಲಿ ನಾಯಕತ್ವದ ವಿಚಾರದಲ್ಲಿ ಭಾರೀ ಅಪಸ್ವರ ಕೇಳಿ ಬಂದಿದ್ದು, ಬಿಜೆಪಿ ಜೂನ್‌ 1 ರ ವರೆಗೆ ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next