Advertisement

ಸಿದ್ದು ನಾಯಕ ಎಂದ ರಮೇಶ್‌ಗೆ ತಿರುಗೇಟು

11:13 PM Dec 17, 2019 | Lakshmi GovindaRaj |

ಶಿವಮೊಗ್ಗ: ಬಿಜೆಪಿ ಒಂದು ರೀತಿಯಲ್ಲಿ ನಮಗೆ ತಾಯಿ ಇದ್ದ ಹಾಗೆ. ಇಲ್ಲಿಗೆ ಬಂದವರು, ನಮ್ಮ ಸಂಸ್ಕೃತಿಯನ್ನು ಮೆಚ್ಚಿ ಇರಬೇಕಾಗುತ್ತದೆ. ಅದನ್ನು ಬಿಟ್ಟು ಏನೇನೋ ಹೇಳಿದ್ರೆ ಅದು, ತಾಯಿಗೆ ಮಾಡುವ ದ್ರೋಹ.. ಹೀಗೆಂದು “ಮಾಜಿ ಸಿಎಂ ಸಿದ್ದರಾಮಯ್ಯ ಈಗಲೂ ನಮ್ಮ ನಾಯಕರು’ ಎಂದು ಹೇಳಿದ್ದ ಶಾಸಕ ರಮೇಶ್‌ ಜಾರಕಿಹೊಳಿ ಅವರಿಗೆ ಸಚಿವ ಕೆ.ಎಸ್‌.ಈಶ್ವರಪ್ಪ ಪರೋಕ್ಷವಾಗಿ ನೀಡಿದ ತಿರುಗೇಟು.

Advertisement

ನಗರದಲ್ಲಿ ನಡೆದ ಜಿಲ್ಲಾ ಸಮಿತಿ ವಿಶೇಷ ಸಭೆಯಲ್ಲಿ ಮಾತನಾಡಿ, ಯಾರೇ ಹೊಸದಾಗಿ ಪಕ್ಷಕ್ಕೆ ಸೇರ್ಪಡೆಯಾದರೂ ಬಿಜೆಪಿ ವಿಚಾರ ಮತ್ತು ಸಿದ್ಧಾಂತ ಒಪ್ಪಿ ನಡೆಯಬೇಕೆಂದರು. ಪ್ರಧಾನಿ ನರೇಂದ್ರ ಮೋದಿ ನಮ್ಮ ನಾಯಕರು. ಆದರೆ, ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದು ಶಾಸಕರಾದವರು ಇಂದಿಗೂ ಕಾಂಗ್ರೆಸ್‌ನವರೇ ನಮ್ಮ ನಾಯಕರು ಎಂದು ಹೇಳಿಕೊಳ್ಳುತ್ತಿದ್ದಾರೆ. ಸಂಘಟನಾತ್ಮಕ ವಿಷಯದಲ್ಲಿ ಇದನ್ನು ಒಪ್ಪಲಾಗದು. ಬಿಜೆಪಿಯೂ ಒಪ್ಪುವುದಿಲ್ಲ ಎಂದರು.

ಮನೆ ಬದಲಾಗಿರಬಹುದು. ನಾಯಕರಲ್ಲ ಎಂದು ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದು ಶಾಸಕರಾದವರು ಹೇಳಿದ್ದಾರೆ. ಆದರೆ, ಯಾರೇ ಆದರೂ ಪಕ್ಷದ ವಿಚಾರ ಮತ್ತು ಸಿದ್ಧಾಂತ ಒಪ್ಪಿ ನಡೆಯಬೇಕು. ಪಕ್ಷವನ್ನು ನಾವು ತಾಯಿಯಂತೆ ನೋಡುತ್ತೇವೆ. ಪಕ್ಷದ ನಾಯಕರೇ ನಮ್ಮ ನಾಯಕರು. ಬಿಜೆಪಿಯ ವಿವಿಧ ವಿಚಾರ ಹಾಗೂ ಹಿಂದುತ್ವವನ್ನು ಬೇರೆ ಪಕ್ಷದ ನಾಯಕರು ಒಪ್ಪುತ್ತಾರಾ ಎಂದು ಖಾರವಾಗಿಯೇ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next