Advertisement

ಭಾರತ ತಂಡದಲ್ಲಿ ಬದಲಾವಣೆಗೆ ಪಾಕಿಸ್ಥಾನವೇ ಕಾರಣ: ರಮೀಜ್ ರಜಾ ಹೇಳಿಕೆ

01:58 PM Dec 31, 2022 | Team Udayavani |

ಹೊಸದಿಲ್ಲಿ: ಟಿ20 ವಿಶ್ವಕಪ್ ನಲ್ಲಿ ಪಾಕಿಸ್ಥಾನದ ಸೋಲಿನ ಬಳಿಕ ಪಿಸಿಬಿ ಅಧ್ಯಕ್ಷ ಸ್ಥಾನವನ್ನು ಕಳೆದುಕೊಂಡಿರುವ ರಮೀಜಾ ರಜಾ ಇದೀಗ ಭಾರತದ ಕ್ರಿಕೆಟ್ ಸೆಟಪ್ ನಲ್ಲಿ ಬದಲಾವಣೆಗೆ ಪಾಕ್ ತಂಡ ಕಾರಣವಾಗಿದೆ ಎಂದು ಹೇಳಿಕೊಂಡಿದ್ದಾರೆ.

Advertisement

ಖಾಸಗಿ ಚಾನಲ್ ಜೊತೆ ಮಾತನಾಡಿದ ರಮೀಜ್ ರಜಾ, ತನ್ನ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ತನ್ನ ಅಧಿಕಾರಾವಧಿಯಲ್ಲಿ ವೈಟ್-ಬಾಲ್ ಕ್ರಿಕೆಟ್‌ ನಲ್ಲಿ ಪಾಕಿಸ್ತಾನದ ಪ್ರದರ್ಶನಗಳು ‘ಅತ್ಯುತ್ತಮ’ ಎಂದು ರಮೀಜ್ ಹೇಳಿದರು.

ಇದನ್ನೂ ಓದಿ:ಹೊಸ ವರ್ಷಕ್ಕೆ ಹೊಸ ಜೀವನ: ಪವಿತ್ರ ಲೋಕೇಶ್‌ ಗೆ ಲಿಪ್‌ ಲಾಕ್‌ ಮಾಡಿ ಮದುವೆಯ ಸುಳಿವು ಕೊಟ್ಟ ನರೇಶ್  

ವೈಟ್ ಬಾಲ್ ಕ್ರಿಕೆಟ್‌ ನಲ್ಲಿ ನಾವು ಅತ್ಯುತ್ತಮ ಪ್ರದರ್ಶನ ನೀಡಿದ್ದೇವೆ. ನಾವು ಏಷ್ಯಾ ಕಪ್ ಫೈನಲ್ ಆಡಿದ್ದೇವೆ, ಭಾರತ ಆಡಲಿಲ್ಲ. ಶತಕೋಟಿ ಡಾಲರ್ ಉದ್ಯಮವಾದ ಭಾರತವು ಹಿಂದೆ ಬಿದ್ದಿದೆ. ಪಾಕಿಸ್ತಾನವು ಹೇಗೆ ಮುಂದೆ ಸಾಗಿತು ಎಂಬುದನ್ನು ಅವರು ಅರಗಿಸಿಕೊಳ್ಳಲು ಸಾಧ್ಯವಾಗದ ಕಾರಣ ಅವರು ನಾಯಕನನ್ನು ಬದಲಾಯಿಸಿದರು. ತಮ್ಮ ಮುಖ್ಯ ಆಯ್ಕೆಗಾರ, ಆಯ್ಕೆ ಸಮಿತಿಯನ್ನು ವಜಾ ಮಾಡಿದರು ಎಂದು ಸುನೋ ಟಿವಿಯಲ್ಲಿ ಸಂವಾದದಲ್ಲಿ ರಮೀಜ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next