Advertisement

ರಾಮನಗರ: ಬಸ್ ಗೆ ಎದುರಾಗಿ ಬಂದ ಒಂಟಿ ಸಲಗ; ಪ್ರಯಾಣಿಕರಲ್ಲಿ ಆತಂಕ

09:43 PM Sep 15, 2022 | Team Udayavani |

ರಾಮನಗರ : ಒಂಟಿ ಸಲಗವೊಂದು ಬಸ್ ಗೆ ಎದುರಾಗಿ ಬಂದು ಪ್ರಯಾಣಿಕರಲ್ಲಿ ಆತಂಕ ಹುಟ್ಟಿಸಿದ ಘಟನೆ ಗುರುವಾರ ನಡೆದಿದೆ.

Advertisement

ಕನಕಪುರ ತಾಲೂಕಿನ ಕಾಡುಶಿವನಹಳ್ಳಿಗೆ ಹೋಗುತ್ತಿದ್ದ ಬಸ್ ಗೆ ಎದುರಾಗಿ ಬಂದ ಒಂಟಿ ಸಲಗ ನೋಡಿ ಗಾಬರಿಗೊಂಡು ಪ್ರಯಾಣಿಕರು ಕಿರುಚಾಡಿದರು.

ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಪಾರಾಗಿದ್ದಾರೆ. ಸಲಗ ಸ್ವಲ್ಪ ಸಮಯ ಭಯ ಹುಟ್ಟಿಸಿ ನಂತರ ಕಾಡಿನೊಳಗೆ ಹೋಗಿದೆ. ಆ ಬಳಿಕ ಭಯದಿಂದಿದ್ದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next