Advertisement

Ramanagara: ವರದಕ್ಷಿಣೆಗಾಗಿ ಪುತ್ರಿಯ ಕೊಲೆ:ಠಾಣೆ ಮೆಟ್ಟಿಲೇರಿದ ತಾಯಿ

07:42 PM Nov 23, 2023 | Team Udayavani |

ರಾಮನಗರ : ವರದಕ್ಷಿಣೆ ಕಿರುಕುಳ ನೀಡಿ ತನ್ನ ಪುತ್ರಿಯನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ಠಾಣೆ ಮೆಟ್ಟಿಲೇರಿದ ಘಟನೆ ನಡೆದಿದೆ.

Advertisement

ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾಧಾ ವೈ. (23) ಮೃತಪಟ್ಟಿದ್ದು,ತೆಲೆಗೆ ಗಂಭೀರ ಗಾಯವಾಗಿತ್ತು. ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಗಂಡನ ಮನೆಯವರು ಹೇಳಿಕೆ ನೀಡಿದ್ದರು. ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ರಾಧಾ ತಾಯಿಗೆ ಕರೆ ಮಾಡಿ ಪತಿ ರವಿ ತಿಳಿಸಿದ್ದರು.

ಮಗಳ ಸ್ಥಿತಿ ನೋಡಿ ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ತಾಯಿ ಆರೋಪ ಮಾಡಿದ್ದು, ಗಂಡನ ಮನೆಯವರ ಮೇಲೆ ದೂರು ದಾಖಲು ಮಾಡಲು ಮುಂದಾಗಿದ್ದಾರೆ. ರಾಮನಗರ‌ದ ಶಾನುಭೋಗನ ಹಳ್ಳಿ ನಿವಾಸಿ ರಾಧಾ ಅವರಿಗೆ ಎರಡು ವರ್ಷದ ಹಿಂದೆ ರವಿ‌ಯೊಂದಿಗೆ ವಿವಾಹವಾಗಿದ್ದು, ವರದಕ್ಷಿಣೆ ತೆಗೆದುಕೊಂಡು ಬರುವಂತೆ ಪೀಡಿಸಲಾಗುತ್ತಿತ್ತು ಎಂದು ಆರೋಪ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next