Advertisement

ರಾಮಮಂದಿರ ಶಿಲಾನ್ಯಾಸ: ಪುರಾಣಪ್ರಸಿದ್ಧ ರಾಮದುರ್ಗದ ಶಬರಿ ಕೊಳ್ಳದಲ್ಲಿ ವಿಶೇಷ ಪೂಜೆ

11:18 AM Aug 05, 2020 | Mithun PG |

ಬೆಳಗಾವಿ:    ಶ್ರೀರಾಮನ ಜನ್ಮಸ್ಥಾನ ಅಯೋಧ್ಯೆಯಲ್ಲಿ ಭವ್ಯ ದಿವ್ಯ ಶ್ರೀ ರಾಮ ಮಂದಿರದ ಭೂಮಿಪೂಜೆ ಕಾರ್ಯಕ್ರಮದ ಅಂಗವಾಗಿ ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ರಾಮದುರ್ಗ ಮಂಡಲವತಿಯಿಂದ ಬುಧವಾರ  ಶ್ರೀರಾಮ, ಸೀತಾದೇವಿ  ಹಾಗೂ ಲಕ್ಷ್ಮಣ ಅವರು ಪಾದಸ್ಷರ್ಷಿಸಿದ್ದರು ಎಂದು ಹೇಳಲಾದ ಪುಣ್ಯಭೂಮಿ ರಾಮದುರ್ಗ ತಾಲೂಕಿನ ಶಬರಿ ಕೊಳ್ಳದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Advertisement

ಇದೇ ಸಂದರ್ಭದಲ್ಲಿ ಶಾಂತಿಃ ಸಮೃದ್ಧಿಗಾಗಿ ಹೋಮವನ್ನು ಮಾಡಲಾಯಿತಲ್ಲದೆ  ಕರಸೇವಾ  ಕಾರ್ಯಕರ್ತರಿಗೆ ಗೌರವಪೂರ್ವಕವಾಗಿ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕೇಂದ್ರ ರಾಜ್ಯ ರೇಲ್ವೆ ಸಚಿವರಾದ ಸುರೇಶ್ ಅಂಗಡಿ, ಉಪ ಸಭಾಧ್ಯಕ್ಷ  ಆನಂದ ಮಾಮನಿ, ರಾಮದುರ್ಗ ಶಾಸಕರಾದ ಮಹಾದೇವಪ್ಪ ಯಾದವಾಡ ಹಾಗೂ ಬೆಳಗಾವಿ ಬಿಜೆಪಿ ಜಿಲ್ಲಾಧ್ಯಕ್ಷರಾದ  ಸಂಜಯ ಪಾಟೀಲ, ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ, ಮಹೇಶ್ ಮಾಹಿತಿ ಹಾಗೂ ಸುಭಾಷ್ ಪಾಟೀಲ್, ಮಂಡಲ ಅಧ್ಯಕ್ಷ ರಾಜೇಶ್ ಬೀಳಗಿ ಮಲ್ಲಣ್ಣ ಯಾದವಾಡ ಮಾತ್ರವಲ್ಲದೆ  ಕಾರ್ಯಕರ್ತರು  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next