Advertisement

ಸುಳ್ಳು ಅನ್ನೋದು ಬಿಜೆಪಿಯವರಿಗೆ ರಕ್ತಗತವಾಗಿದೆ : ರಾಮಲಿಂಗಾ ರೆಡ್ಡಿ

02:00 PM Jul 07, 2022 | Team Udayavani |

ಬೆಂಗಳೂರು: ನಮ್ಮ ರಾಜ್ಯದಲ್ಲಿ ಒಂದೊಂದು ನ್ಯಾಯವಿದೆ, ನಮಗೊಂದು,ಬಿಜೆಪಿಯವರಿಗೊಂದು ಕಾನೂನಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಕಿಡಿ ಕಾರಿದ್ದಾರೆ.

Advertisement

ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ವಿರುದ್ಧ ಎಸಿಬಿ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಸ್ಪೀಕರ್ ಅನುಮತಿಯಿಲ್ಲದೆ ಶಾಸಕ ಜಮೀರ್ ಮೇಲೆ ದಾಳಿ ಮಾಡಲಾಗಿದೆ. ಅವರ ಪಕ್ಷದವರಿಗೆ ಮಾತ್ರ ಸ್ಪೀಕರ್ ಅನುಮತಿ ಕೇಳಿದ್ದಾರೆ. ಎಸಿಬಿಯನ್ನ ದುರ್ಬಳಕೆಮಾಡಿಕೊಳ್ಳುತ್ತಿದ್ದಾರೆ. ಇದೊಂದೇ ಅಲ್ಲ ಎಲ್ಲಾ ಸ್ವಾಯತ್ತ ಸಂಸ್ಥೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

ಪಿಎಸ್ ಐ ನೇಮಕಾತಿ ಅಕ್ರಮ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಆರೋಪ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ರಾಮಲಿಂಗಾರೆಡ್ಡಿ ಆಕ್ರೋಶ ಹೊರ ಹಾಕಿ, ಸುಳ್ಳು ಅನ್ನೋದು ಬಿಜೆಪಿಯವರಿಗೆ ರಕ್ತಗತವಾಗಿದೆ. ಸಿದ್ದರಾಮಯ್ಯ ಕಾಲದಲ್ಲಿ ಅಕ್ರಮ ಅಂತಾರೆ. ಆಗ ಆಗಿದ್ದರೆ ಇವರು ಏನು ಮಾಡುತ್ತಿದ್ದರು. ಕಡ್ಲೆ ಪುರಿ ತಿನ್ನುತ್ತಿದ್ರಾ? ಅನ್ಯಾಯ ಕೇಳಬೇಕಿತ್ತು. ಲೋಕಾಯುಕ್ತಕ್ಕೆ ದೂರು ನೀಡಬೇಕಿತ್ತು. ಏನೂ ನಡೆಯದಿದ್ದಕ್ಕೆ ದೂರು ಕೊಟ್ಟಿಲ್ಲ. ಈಗ ಸುಮ್ಮನೆ ಹೇಳೋರು ಆಗ ಏನ್ಮಾಡ್ತಿದ್ದೀರಿ.ಕಡ್ಲೆಕಾಯಿ,ಕಡ್ಲೆಪುರಿ ತಿನ್ನುತ್ತಿದ್ದರಾ? ಮೊದಲು ಇದನ್ನ ನಾವೇ ಎತ್ತಿದ್ದು,ನಾನು,ಪ್ರಿಯಾಂಕ್ ಖರ್ಗೆ ರೈಸ್ ಮಾಡಿದ್ದೆವು. ಇದರಲ್ಲಿ ಪೊಲೀಸ್ ಇಲಾಖೆಯವರೇ ಇದ್ದಾರೆ. ದೊಡ್ಡ ಭ್ರಷ್ಟಾಚಾರ ಆಗಿದೆ ಎಂದು ಹೇಳಿದ್ದೆವು. ಈಗ ಅವರದೇ ಸರ್ಕಾರವಿದೆ. ಅವರ ಮಂತ್ರಿಗಳನ್ನ ತನಿಖೆ ಮಾಡುವುದಕ್ಕೆ ಬಿಡುತ್ತಾರಾ? ಅದಕ್ಕೆ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಯಾಗಬೇಕು. ಪ್ರಕರಣದ ಸತ್ಯಾಂಶ ಹೊರಬರಬೇಕು ಎಂದು ಒತ್ತಾಯಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next