Advertisement

ಕಾನೂನುಬದ್ಧವಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ: ಅಮಿತ್‌ ಶಾ

11:17 AM Jul 23, 2017 | |

ಜೈಪುರ: ಅಯೋಧ್ಯೆಯಲ್ಲಿ ಪರಸ್ಪರ ಮಾತುಕತೆ ಮೂಲಕ ಕಾನೂನುಬದ್ಧ ವಾಗಿ ರಾಮಮಂದಿರ ನಿರ್ಮಿಸುವುದು ಬಿಜೆಪಿ ಆಶಯ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ.

Advertisement

 ಜೈಪುರದಲ್ಲಿ ಶನಿವಾರ ಮಾತನಾ ಡಿದ ಅವರು, 4 ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲೂ ಪಕ್ಷ ಇದನ್ನು ಹೇಳಿಕೊಂಡು ಬಂದಿದೆ ಎಂದಿದ್ದಾರೆ. 

ಇದೇ ವೇಳೆ, ಕೆನೆಪದರದಲ್ಲಿರುವ ಎಸ್‌ಸಿ,ಎಸ್ಟಿ ಸಮುದಾಯದವರನ್ನು ಮೀಸಲಾತಿಯಿಂದ ಹೊರಗಿ ಡುವ ಸಲಹೆ ಬಗ್ಗೆ ಪ್ರತಿಕ್ರಿಯಿಸದ ಶಾ, ಸಂಸತ್‌ನಲ್ಲಿ ಎಲ್ಲ ಪಕ್ಷಗಳ ಜೊತೆ ಸಮಾಲೋಚನೆ ನಡೆಸಿ ತೀರ್ಮಾನಕ್ಕೆ ಬರಲಾಗುವುದು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next