Advertisement

ವಿದ್ಯಾರ್ಥಿಗಳ ಕೈಯಿಂದ ರಕ್ಷಾ ಬಂಧನ ತೆಗೆಸಿದ ಪ್ರಕರಣ : ಕ್ಷಮೆ ಬಳಿಕ ಸುಖಾಂತ್ಯ

02:03 PM Aug 13, 2022 | Team Udayavani |

ಸುರತ್ಕಲ್‌ : ಕಾಟಿಪಳ್ಳದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯೊಂದರಲ್ಲಿ ಗುರುವಾರ ವಿದ್ಯಾರ್ಥಿಗಳ ಕೈಯ್ಯಲ್ಲಿದ್ದ ರಕ್ಷಾ ಬಂಧನ ತೆಗೆಸಿದ ವಿವಾದ ಕ್ಷಮೆ ಯಾಚನೆಯೊಂದಿಗೆ ಸುಖಾಂತ್ಯಗೊಂಡಿತು.

Advertisement

ಕೆಲವೊಂದು ಶಾಲಾ ನಿಯಮಾವಳಿ ಪಾಲಿಸಬೇಕೆಂದು ಹೇಳಿ ರಕ್ಷಾ ಬಂಧನ ಧರಿಸುವಂತಿಲ್ಲ ಎಂದು ತೆಗೆಯುವಂತೆ ಸೂಚಿಸಿದ್ದರು. ಇದರಿಂದ ಅಸಮಾಧಾನಗೊಂಡ ಪೋಷಕರು, ಹಿಂದೂ ಸಂಘಟನೆಗಳ ಪ್ರಮುಖರು, ಸ್ಥಳೀಯ ಬಿಜೆಪಿ ಮುಖಂಡರು ಶುಕ್ರವಾರ ಶಾಲೆಗೆ ಆಗಮಿಸಿ ರಕ್ಷಾ ಬಂಧನ ತೆಗೆಸಿದ ಶಿಕ್ಷಕರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿ ಪಟ್ಟು ಹಿಡಿದರು.

ಸುರತ್ಕಲ್‌ ಪೊಲೀಸ್‌ ಠಾಣೆಯ ಆಧಿಕಾರಿ ಚಂದ್ರಪ್ಪ ಹಾಗೂ ಎಸ್‌ಐ ಪುನೀತ್‌ ಅವರ ಸಮ್ಮುಖದಲ್ಲಿ ಶಾಲೆಯ ಸಂಚಾಲಕ ವಂ| ಸಂತೋಷ್‌ ಲೋಬೋ ಅವರು ಸ್ಥಳಕ್ಕೆ ಆಗಮಿಸಿ ತಿಳಿಯದೆ ಆದ ತಪ್ಪಿನಿಂದ ನೋವಾಗಿದ್ದರೆ ಕ್ಷಮೆಯಾಚಿಸುತ್ತೇವೆ. ಪೋಷಕರ ಸಭೆಯಲ್ಲಿಯೂ ಮಾತುಕತೆ ನಡೆಸಿ ಭಿನ್ನಾಭಿಪ್ರಾಯವಿದ್ದರೆ ಪರಿಹಾರ ಮಾಡಿಕೊಳ್ಳುತ್ತೇವೆ. ಎಲ್ಲ ಧರ್ಮದವರನ್ನು ನಾವು ಸಮಾನವಾಗಿ ಗೌರವಿಸುತ್ತೇವೆ ಎಂದು ಹೇಳಿದರು. ಆ ಬಳಿಕ ರಕ್ಷಾ ಬಂಧನ ತೆಗೆಸಿದ ಶಿಕ್ಷಕಿಯೂ ಕ್ಷಮೆಯಾಚಿಸಿದ್ದರಿಂದ ಪ್ರಕರಣ ಸುಖಾಂತ್ಯಗೊಂಡಿತು.

ಇದನ್ನೂ ಓದಿ : ಮಂಗಳೂರು : ಅಪಾಯಕಾರಿ ಕಾಲುಸಂಕಗಳ ಪಟ್ಟಿ ನೀಡಲು ಡಿಸಿ ಆದೇಶ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next