Advertisement

ಶ್ರೀಷ್ಮಾ ಹೆಗಡೆಗೆ ರಕ್ಷಾ ಮಂತ್ರಿ ಪದಕ ಪ್ರದಾನ

03:31 PM Jan 23, 2021 | Team Udayavani |

ಹರಿಹರ: ನಗರದ ಡಾ.ಪ್ರವೀಣ್‌ ಹೆಗಡೆ, ಬಿಂದುರವರ ಪುತ್ರಿ,·ಸಮೀಪದ ಆದಿತ್ಯ ಬಿರ್ಲಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ
·ಶ್ರೀಷ್ಮಾ ಹೆಗಡೆ ನವದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌·ರಿಂದ ರಕ್ಷಾ ಮಂತ್ರಿ ಪದಕ ಪಡೆದರು. ಕಳೆದ ವರ್ಷ ನವದೆಹಲಿಯಲ್ಲಿ
ನಡೆದ ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ಕರ್ನಾಟಕ ಗೋವಾ ಎನ್‌ಸಿಸಿ ರೆಜಿಮೆಂಟ್‌ 33 ಬೆಟಾಲಿಯನ್‌ ನಾಯಕಿಯಾಗಿ ಉತ್ತಮ·ಪ್ರದರ್ಶನ ನೀಡಿದ್ದರಿಂದ ನವದೆಹಲಿಯ ಜನರಲ್‌ ಕಾರಿಯಪ್ಪ·ಪರೇಡ್‌ ಮೈದಾನದಲ್ಲಿ ಪ್ರಶಸ್ತಿ ಗೌರವ ಪಡೆದರು. ಕರ್ನಾಟಕ ಸಮರ·ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಬಿ.ವಾಸುದೇವ, ರಾಜ್ಯ ಗೌರವಾಧ್ಯಕ್ಷ·ಗುರು ದ್ರೋಣಾಚಾರ್ಯ ಸಮ್ಮಾನ ಪುರಸ್ಕೃತ ಡಾ.ಜಿ.ಜೆ.ಮೆಹೆಂದಳೆ,·ಚಂದ್ರಶೇಖರ ಭಟ್‌, ನಿವೃತ್ತ ಶಿಕ್ಷಕ ಎಸ್‌.ಎಂ.ಹಿರೇಮಠ, ಶೋಭಾ·ಹಿರೇಮಠ ಶ್ರೀಷ್ಮಾ ಹೆಗಡೆಯವರ ಸಾಧನೆಗೆ ಅಭಿನಂದಿಸಿದ್ದಾರೆ

Advertisement

ಹರಿಹರ: ಆದಿತ್ಯ ಬಿರ್ಲಾ ಪಪೂ ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿನಿ ಶ್ರೀಷ್ಮಾ ಹೆಗಡೆ ಅವರಿಗೆ ನವದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌·ರಕ್ಷಾ ಮಂತ್ರಿ ಪದಕ ವಪ್ರದಾನ ಮಾಡಿದರು.

ಇದನ್ನೂಓದಿ·:·ಪಂಚಪೀಠಗಳಲ್ಲಿ ಏಕತೆ ಭಾವಮೂಡುವವರೆಗೂ ತಟಸ್ಥ ನೀತಿ

Advertisement

Udayavani is now on Telegram. Click here to join our channel and stay updated with the latest news.

Next