Advertisement

ರಾಜ್ಯಸಭೆ ಚುನಾವಣೆ : ಕಾಂಗ್ರೆಸ್‌ ಶಾಸಕಾಂಗ ಸಭೆ

10:42 PM Jun 09, 2022 | Team Udayavani |

ಬೆಂಗಳೂರು: ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ  ನಡೆಯಿತು.

Advertisement

70 ಮತಗಳ ಪೈಕಿ ಜೈರಾಂ ರಮೇಶ್‌ ಅವರಿಗೆ 45 ಮೊದಲ ಪ್ರಾಶಸ್ತ್ಯದ ಮತ, ಮನ್ಸೂರ್‌ ಅಲಿ ಖಾನ್‌ಗೆ 25 ಮೊದಲ ಪ್ರಾಶಸ್ತ್ಯ ಮತ ಹಾಗೂ 45 ದ್ವಿತೀಯ ಪ್ರಾಶಸ್ತ್ಯ ಮತ ಹಂಚಿಕೆ ಮಾಡಲಾ ಯಿತು. ಎಲ್ಲರೂ ಮತದಾನಕ್ಕೆ ಹಾಜರಾಗಲು ಈಗಾಗಲೇ ವಿಪ್‌ ಜಾರಿ ಮಾಡಲಾಗಿದೆ.

ಕಾಂಗ್ರೆಸ್‌ನ ಮತವನ್ನು ಬೇರೆ ಪಕ್ಷಗಳು ಸೆಳೆಯುವ ಪ್ರಯತ್ನಗಳ ಬಗ್ಗೆಯೂ ಪ್ರಸ್ತಾವ ವಾಯಿತು. ಆದರೆ ಆ ಬಗ್ಗೆ ಅನುಮಾನ ಪಡುವುದು ಬೇಡ. ನಮ್ಮ ಶಾಸಕರ ಮೇಲೆ ವಿಶ್ವಾಸ ಇರಿಸೋಣ. ನಮ್ಮ ಮತ ಉಳಿಸಿಕೊಳ್ಳೋಣ ಎಂಬ ಅಭಿಪ್ರಾಯ ವ್ಯಕ್ತವಾಯಿತು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next