Advertisement

ರಾಜ್ಯಸಭೆ ಗೆಲ್ಲಲು ಕಸರತ್ತು; ಕುದುರೆ ವ್ಯಾಪಾರದ ಭೀತಿ

10:16 PM Jun 05, 2022 | Team Udayavani |

ನವದೆಹಲಿ: ದೇಶಾದ್ಯಂತ ರಾಜ್ಯಸಭೆ ಚುನಾವಣೆ ಕಣ ರಂಗೇರುತ್ತಿದ್ದು, ಕುದುರೆ ವ್ಯಾಪಾರದ ಭೀತಿಯೂ ಜೋರಾಗಿದೆ.

Advertisement

ರಾಜಸ್ಥಾನದಲ್ಲಿ ಈಗಾಗಲೇ ಶಾಸಕರ ರೆಸಾರ್ಟ್‌ ವಾಸ ಆರಂಭವಾಗಿದೆ. ಕೆಲವೊಂದು ವಿಚಾರಗಳಲ್ಲಿ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದ 6 ಮಂದಿ ಕಾಂಗ್ರೆಸ್‌ ಶಾಸಕರ ಮನವೊಲಿಸುವಲ್ಲಿ ಸಿಎಂ ಅಶೋಕ್ ಗೆಹ್ಲೋಟ್
ಸಫ‌ಲರಾಗಿದ್ದು, ಭಾನುವಾರ ಆ 6 ಮಂದಿಯೊಂದಿಗೆಗೆಹ್ಲೋಟ್ ಉದಯಪುರದ ರೆಸಾರ್ಟ್‌ಗೆ ತಲುಪಿದ್ದಾರೆ.

ಜತೆಗೆ, ಬಿಜೆಪಿಯಿಂದ ಶಾಸಕರ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ಆರೋಪಿಸಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರನ್ನೂ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ನಾಯಕರು ಭಾನುವಾರ ಸಭೆ ಸೇರಿ ಚುನಾವಣಾ ಕಾರ್ಯತಂತ್ರ ರೂಪಿಸಿದ್ದಾರೆ. ಮಹಾ ವಿಕಾಸ ಅಘಾಡಿ ಕೂಡ ಎಲ್ಲ ಶಾಸಕರನ್ನೂ ಮುಂಬೈಗೆ ಕರೆಸಿಕೊಂಡಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next