Advertisement

ಆ.21ರಂದು INS ಕದಂಬಕ್ಕೆ ರಾಜನಾಥ ಸಿಂಗ್‌

11:25 PM Aug 19, 2023 | Team Udayavani |

ಕಾರವಾರ: ದೇಶದ ರಕ್ಷಣ ಸಚಿವ ರಾಜನಾಥ ಸಿಂಗ್‌ ಅವರು ಆ.21ರಂದು ಸೀಬರ್ಡ್‌ ಐಎನ್‌ಎಸ್‌ ಕದಂಬಕ್ಕೆ ಭೇಟಿ ನೀಡಿ ನೌಕಾ ಸಿಬಂದಿಗಾಗಿ ನಿರ್ಮಿಸಿದ ಬಹುಮಹಡಿ ಕಟ್ಟಡಗಳನ್ನು ಉದ್ಘಾಟಿಸಲಿದ್ದಾರೆ ಎಂದು ಕಾರವಾರ ನೌಕಾನೆಲೆ ಕಮಾಂಡರ್‌ ತಿಳಿಸಿದ್ದಾರೆ.

Advertisement

ಸೀಬರ್ಡ್‌ 2ನೇ ಹಂತದ ಕಾಮಗಾರಿಗಳು 2025ಕ್ಕೆ ಮುಕ್ತಾಯವಾಗಲಿವೆ. ಈಗ ಪೂರ್ಣಗೊಂಡ ನಾಲ್ಕಾರು ಕಾಮಗಾರಿಗಳನ್ನು ಸಚಿವರು ಉದ್ಘಾಟಿಸಲಿದ್ದಾರೆ. ಸಚಿವರು ಸೋಮವಾರ ಮಧ್ಯಾಹ್ನ 2ಕ್ಕೆ ಗೋವಾ ರಕ್ಷಣ ನೆಲೆಯನ್ನು ತಲುಪಲಿದ್ದಾರೆ. ಬಳಿಕ ಏಷ್ಯಾದಲ್ಲೇ ಅತಿದೊಡ್ಡ ನೌಕಾನೆಲೆ ಆಗಿರುವ ಐಎನ್‌ಎಸ್‌ ಕದಂಬಕ್ಕೆ ಆಗಮಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next