Advertisement

ಇನ್ನೊಂದು ವಿಮಾನ ವಾಹಕ ನೌಕೆ ನಿರ್ಮಾಣ ಆರಂಭ: ಸಚಿವ ರಾಜನಾಥ್‌ ಸಿಂಗ್‌

11:59 PM Dec 09, 2022 | Team Udayavani |

ಹೊಸದಿಲ್ಲಿ: ಸ್ವದೇಶೀಯವಾಗಿ ನಿರ್ಮಿಸಲಾದ ಐಎನ್‌ಎಸ್‌ ವಿಕ್ರಾಂತ್‌ ಯುದ್ಧನೌಕೆಯನ್ನು ನೌಕಾಪಡೆಯ ಸೇವೆಗೆ ಸೇರ್ಪಡೆಗೊಳಿಸಿದ ಬಳಿಕ ಈಗ ಇನ್ನೊಂದು ಸಮರ ವಿಮಾನ ವಾಹಕ ಯುದ್ಧನೌಕೆಯ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂಬು ದಾಗಿ ಕೇಂದ್ರ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

Advertisement

ಖಾಸಗಿ ಟಿವಿ ವಾಹಿನಿ ಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಐಎನ್‌ಎಸ್‌ ವಿಕ್ರಾಂತ್‌ ನೌಕೆಯನ್ನು ನಿರ್ಮಿಸುವ ಮೂಲಕ ಭಾರತ ಇಂತಹ ನೌಕಾ ನಿರ್ಮಾಣ ಸಾಮರ್ಥ್ಯ ಹೊಂದಿರುವ ಜಗತ್ತಿನ 7ನೇ ದೇಶವಾಗಿ ಹೊರಹೊಮ್ಮಿದೆ ಎಂದರು.

ಐಎನ್‌ಎಸ್‌ ವಿಕ್ರಾಂತ್‌ ನಿರ್ಮಾಣದ ಕೌಶಲವನ್ನು ಪುನರಾವರ್ತಿಸುವ ಇರಾದೆಯಿದೆ ಎಂದು ಕಳೆದ ವಾರವಷ್ಟೇ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್‌ ಹರಿಕುಮಾರ್‌ ಹೇಳಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next