Advertisement

ರಾಜಕುಮಾರ ವಿಜಯಯಾತ್ರೆ

01:32 PM May 14, 2017 | Team Udayavani |

ಪುನೀತ್‌ ರಾಜಕುಮಾರ್‌ ಅವರ “ರಾಜ್‌ಕುಮಾರ’ ಚಿತ್ರ ಬಿಡುಗಡೆಯಾಗಿ ಯಶಸ್ವಿ 50 ದಿನಗಳನ್ನು ಪೂರೈಸಿ ಮುನ್ನಡೆಯುತ್ತಿದೆ. “ರಾಜ್‌ಕುಮಾರ’ ಕಲೆಕ್ಷನ್‌ ವಿಷಯದಲ್ಲೂ ದೊಡ್ಡ ಸುದ್ದಿ ಮಾಡುತ್ತಿದೆ. “ರಾಜ್‌ ಕುಮಾರ’ 50 ಕೋಟಿ ರೂಪಾಯಿಗಳನ್ನು ದಾಟಿ ಮುನ್ನುಗ್ಗುತ್ತಿದೆ ಎಂಬ ಮಾತು ಕೂಡಾ ಜೋರಾತಿ ಕೇಳಿಬರುತ್ತಿದೆ. ಈಗ ಚಿತ್ರತಂಡ ಪ್ರೇಕ್ಷಕರಿಗೆ ಥ್ಯಾಂಕ್ಸ್‌ ಹೇಳಲು ಹೊರಟಿದೆ. ಅದು “ರಾಜ್‌ಕುಮಾರ’ ವಿಜಯಯಾತ್ರೆ ಮೂಲಕ.

Advertisement

ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ನೀಡುವ ಮೂಲಕ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಯಶಸ್ವಿ ಮಾಡಿಕೊಟ್ಟ ಪ್ರೇಕ್ಷಕರಿಗೆ ಧನ್ಯವಾದ ಹೇಳುವ ಸಲುವಾಗಿ ಚಿತ್ರತಂಡ ವಿಜಯಾತ್ರೆ ಹೊರಟಿದ್ದು, ಈಗಾಗಲೇ ಚಿಕ್ಕಮಗಳೂರು, ಹಾಸನ ಹಾಗೂ ಮೈಸೂರಿನ ಚಿತ್ರಮಂದಿರಗಳಿಗೆ ಭೇಟಿ ನೀಡಿ ಅಭಿಮಾನಿಗಳೊಂದಿಗೆ ಕೆಲ ಹೊತ್ತು ಕಳೆದ ಚಿತ್ರತಂಡ ಇಂದು ನಂಜನಗೂಡು, ಚಾಮರಾಜನಗರ, ಕೊಳ್ಳೇಗಾಲ, ಮಂಡ್ಯದ ಚಿತ್ರಮಂದಿರಗಳಿಗೆ ಭೇಟಿ ಕೊಡಲಿದೆ. ಈ ಮೂಲಕ ಅಭಿಮಾನಿಗಳ ಜೊತೆ ಒಂದಷ್ಟು ಸಮಯ ಕಳೆಯಲು ಚಿತ್ರತಂಡ ನಿರ್ಧರಿಸಿದೆ.

ಸಿನಿಮಾವನ್ನು ನೋಡಿ ಪ್ರೋತ್ಸಾಹಿಸುತ್ತಿರುವ ಪ್ರೇಕ್ಷಕರಿಗೆ ಧನ್ಯವಾದ ಹೇಳುವುದು ನಮ್ಮ ಕರ್ತವ್ಯ. ಅದರಂತೆ ವಿಜಯಯಾತ್ರೆ ಹೋಗಲಿದ್ದೇವೆ ಎಂದು ಈ ಹಿಂದೆಯೇ ನಿರ್ದೇಶಕ ಸಂತೋಷ್‌ ಆನಂದರಾಮ್‌ ಹೇಳಿದ್ದರು. ಅದರಂತೆ ಈಗ ಚಿತ್ರತಂಡ ಥಿಯೇಟರ್‌ ವಿಸಿಟ್‌ ಮಾಡುತ್ತಿದೆ. ಈ ಹಿಂದೆ ಪುನೀತ್‌ “ದೊಡ್ಮನೆ ಹುಡುಗ’ ಚಿತ್ರದ ಪ್ರಮೋಶನ್‌ ವೇಳೆ ಯಾವ ಊರುಗಳಿಗೆ ಭೇಟಿ ಕೊಡಲು ಸಾಧ್ಯವಾಗಿರಲಿಲ್ಲವೋ, ಆ ಊರುಗಳಿಗೆ ಮೊದಲ ಆದ್ಯತೆ ಕೊಡುತ್ತಿದ್ದೇವೆ ಎಂದು ಹೇಳಿದ್ದರು ಕೂಡಾ. ಅದರಂತೆ ಈಗ ಚಿಕ್ಕಮಗಳೂರು, ಮೈಸೂರು, ಮಂಡ್ಯ ಕಡೆ ಚಿತ್ರತಂಡ ಪಯಣ ಬೆಳೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next