Advertisement

ಕಾಮಗಾರಿಗಾಗಿ ರಾಜಕಾಲುವೆಯೇ ಬಂದ್‌!

06:09 PM Jan 13, 2023 | Team Udayavani |

ಬೈಕಂಪಾಡಿ: ಖಾಸಗಿ ಜಮೀನಿನಲ್ಲಿ ಹಾದು ಹೋಗುವ ರಾಜಕಾಲುವೆಗೆ ಅಡ್ಡಲಾಗಿ ಕಿರು ಸೇತುವೆ ನಿರ್ಮಿಸುವ ಉದ್ದೇಶದಿಂದ ಕಾಲುವೆಯಲ್ಲಿ ಹರಿಯುವ ನೀರಿಗೆ ಮಣ್ಣು ಹಾಕಿ ಬಂದ್‌ ಮಾಡಿದ ಪರಿಣಾಮ ಪರಿಸರದಲ್ಲಿ ದುರ್ವಾಸನೆ ಹರಿಡಿ ಸಾರ್ವಜನಿಕರ ದೂರಿನ ಮೇರೆಗೆ ಮನಪಾ ಸದಸ್ಯರು ಹಾಗೂ ಪಾಲಿಕೆ ಎಂಜಿನಿಯರ್‌ ವಿನೋದ್‌ ಕುಮಾರ್‌ ಭೇಟಿ ನೀಡಿ ಪರಿಶೀಲಿಸಿದರು.

Advertisement

ಸ್ಥಳೀಯ ಪಾಲಿಕೆ ಸದಸ್ಯರಾದ ಸುಮಿತ್ರಾ ಕರಿಯ ಹಾಗೂ ವೇದಾವತಿ ಅವರಿಗೆ ಸಾರ್ವಜನಿಕರು ರಾಜಕಾಲುವೆಯಲ್ಲಿ ಸಂಸ್ಕರಿಸದೆ ನೇರವಾಗಿ ಬಿಟ್ಟ ತ್ಯಾಜ್ಯ ನೀರು ಹರಿಯುತ್ತಿರುವ ಬಗ್ಗೆ ಗಮನಕ್ಕೆ ತಂದರು.

ಗುರುವಾರ ಹೊಸಬೆಟ್ಟು, ಕುಳಾಯಿ, ಬೈಕಂಪಾಡಿ ರಾಜಕಾಲುವೆ ಪರಿಶೀಲನೆ ನಡೆಸಲಾಯಿತು. ಖಾಸಗಿ ಜಮೀನಿನಲ್ಲಿ ಸಂಕ ನಿರ್ಮಿಸುವ ಉದ್ದೇಶದಿಂದ ರಾಜಕಾಲುವೆಗೆ ಮಣ್ಣು ಹಾಕಿದ್ದರಿಂದ ನೀರು ನಿಂತು ದುರ್ವಾಸನೆ ಹರಡಿತ್ತು.

ಪಾಲಿಕೆ ಎಂಜಿನಿಯರ್‌ ಸಮಕ್ಷಮ ಸಂಬಂಧಪಟ್ಟವರಿಗೆ ಕಿರು ಸೇತುವೆ ನಿರ್ಮಾಣ ಪೂರ್ಣವಾಗುವವರೆಗೆ ರಾಜಕಾಲುವೆಯಲ್ಲಿ ನೀರು ಹರಿಯಲು ತಾತ್ಕಾಲಿಕವಾಗಿ ತೋಡುತೆಗೆದು ನೀರು ಸರಾಗವಾಗಿ ಹರಿಯುವಂತೆ ಸೂಚಿಸಲಾಯಿತು. ಇದೇ ಸಂದರ್ಭ ರಾಜಕಾಲುವೆಗೆ ಸಂಸ್ಕರಿಸದ ತ್ಯಾಜ್ಯ ನೀರು ಹರಿದು ಬರುವುದನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲು ಮನಪಾ ಸದಸ್ಯರು ಆಗ್ರಹಿ ಸಿದರು. ಬಿಜೆಪಿ ಪ್ರಮುಖರಾದ ಗುರುಪ್ರಸಾದ್‌, ಪ್ರಜ್ವಲ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next