Advertisement

ವಿಜಯ್ ನನ್ನ ಕಣ್ಣ ಮುಂದೆ ಬೆಳೆದ ಹುಡುಗ, ನಾನು ಆತನ ಪ್ರತಿಸ್ಪರ್ಧಿ ಅಲ್ಲ: Rajinikanth

12:35 PM Jan 27, 2024 | Team Udayavani |

ಚೆನ್ನೈ: ಕಾಲಿವುಡ್‌ ನಲ್ಲಿ ಸೂಪರ್ಸ್ಟಾರ್ರಜಿನಿಕಾಂತ್ಹಾಗೂ ದಳಪತಿ ಇಬ್ಬರ ಅಭಿಮಾನಿ ವಲಯ ದೊಡ್ಡದಿದೆ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ ವಾರ್‌ಗಳು ನಡೆಯುತ್ತಿರುತ್ತವೆ. ಈ ವಿಚಾರದ ಬಗ್ಗೆ ʼತಲೈವಾʼ ಮಾತಾನಾಡಿದ್ದಾರೆ.

Advertisement

ರಜಿನಿಕಾಂತ್‌ ಅವರ ಪುತ್ರಿ ಐಶ್ವರ್ಯಾ ನಿರ್ದೇಶನದ ʼಲಾಲ್‌ ಸಲಾಂʼ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭ ಶುಕ್ರವಾರ(ಜ.26 ರಂದು) ಚೆನ್ನೈನಲ್ಲಿ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ರಜಿನಿಕಾಂತ್‌ ಮಾತನಾಡಿದ್ದಾರೆ.

ರಜಿನಿಕಾಂತ್‌ ಹಾಗೂ ದಳಪತಿ ವಿಜಯ್‌ ಅವರ ಅಭಿಮಾನಿಗಳಲ್ಲಿ ಆಗಾಗ ಕೆಲವೊಂದು ವಿಚಾರಗಳಿಗೆ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿರುತ್ತವೆ. ʼಜೈಲರ್‌ʼ ಆಡಿಯೋ ಸಮಾರಂಭದಲ್ಲಿ ರಜಿನಿಕಾಂತ್ ‘ಕಾಗೆ-ಹದ್ದು’ ಕಥೆಯೊಂದನ್ನು ಹೇಳಿದ್ದರು. ಇದನ್ನು ಬೇಕಂತಲೇ ರಜಿನಿಕಾಂತ್‌ ವಿಜಯ್‌ ಅವರಿಗೆಯೇ ಹೇಳಿದ್ದಾರೆ ಎಂದು ಕೆಲ ಫ್ಯಾನ್ಸ್‌ ಗಳು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾಡಿದ್ದರು. 

ಇದನ್ನೂ ಓದಿ: Lal Salaam: “ನನ್ನ ತಂದೆ ಸಂಘಿಯಲ್ಲ..” ಮಗಳ ಮಾತು ಕೇಳಿ ಭಾವುಕರಾದ ರಜಿನಿಕಾಂತ್

ಇದೀಗ ಈ ಬಗ್ಗೆ ರಜಿನಿಕಾಂತ್‌ ಮಾತನಾಡಿದ್ದಾರೆ. “ನಾನು ಹೇಳಿದ ಕಾಗೆ ಮತ್ತು ಹದ್ದಿನ ಕಥೆಯನ್ನು ವಿಭಿನ್ನವಾಗಿ ವ್ಯಾಖ್ಯಾನಿಸಲಾಗಿದೆ. ಇದರಿಂದ ನನಗೆ ತುಂಬಾ ಬೇಸರವಾಗಿದೆ. ವಿಜಯ್‌ ನನ್ನ ಕಣ್ಣ ಮುಂದೆ ಬೆಳೆದ ಹುಡುಗ. ‘ಧರ್ಮತಿನ್ ತಲೈವನ್’ ಚಿತ್ರೀಕರಣದ ಸಮಯದಲ್ಲಿ, ವಿಜಯ್ 13 ವರ್ಷ ವಯಸ್ಸಿನವರಾಗಿದ್ದರು. ಶೂಟಿಂಗ್ ಮುಗಿದ ನಂತರ ಎಸ್.ಎ.ಚಂದ್ರಶೇಖರ್ ಅವರು ನನಗೆ ವಿಜಯ್ ನನ್ನು ಪರಿಚಯಿಸಿದರು. ಅವರು ನಟನೆಯಲ್ಲಿ ಆಸಕ್ತಿ ಹೊಂದಿದ್ದರು ಎಂದು ಹೇಳಿದರು. ವಿಜಯ್‌ ನನ್ನು ಮೊದಲು ಓದುವ ಕಡೆ ಗಮನ ಕೊಡಲು ಹೇಳು ಎಂದು ಅವರು ನನ್ನ ಬಳಿ ಹೇಳಿದರು. ಅವನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಲು ನಾನು ಅವನಿಗೆ ಸಲಹೆ ನೀಡಿದ್ದೆ” ಎಂದು ಅಂದಿನ ದಿನಗಳ ಬಗ್ಗೆ ಹೇಳಿದರು.

Advertisement

“ಆ ಬಳಿಕ ವಿಜಯ್‌ ನಟನಾದ. ಇಂದು ಆತ ಉನ್ನತಮಟ್ಟದಲ್ಲಿದ್ದಾನೆ. ಅದಕ್ಕೆ ಕಾರಣ ಆತನ ಶಿಸ್ತು,ಪರಿಶ್ರಮ ಹಾಗೂ ಪ್ರತಿಭೆ. ಮುಂದೆ ಆತ ರಾಜಕೀಯಕ್ಕೆ ಬರಲಿದ್ದಾನೆ. ನಮ್ಮ ನಡುವೆ ಪೈಪೋಟಿ ಇದೆ ಎಂದು ಹೇಳುತ್ತಾರೆ, ಆದರೆ ನಾನು ನನ್ನದೇ ಸ್ಪರ್ಧಿಯೆಂದು ವಿಜಯ್‌ ಹೇಳುತ್ತಾರೆ. ನಾನು ಕೂಡ ಅದನ್ನೇ ಹೇಳುತ್ತೇನೆ. ನಾವು ಪರಸ್ಪರರ  ಪ್ರತಿಸ್ಪರ್ಧಿ ಎಂದು ಹೇಳುವುದು ಅಗೌರವ. ನಮ್ಮ ಅಭಿಮಾನಿಗಳಲ್ಲಿ ನಾನು ಮನವಿ ಮಾಡುತ್ತೇನೆ ದಯವಿಟ್ಟು ನಮ್ಮ‌ ನಡುವೆ ಹೋಲಿಕೆ ಮಾಡಬೇಡಿ” ಎಂದು ಹೇಳಿದ್ದಾರೆ.

ರಜಿನಿಕಾಂತ್‌ ಸದ್ಯ ʼಲಾಲ್ ಸಲಾಂʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಆ ಬಳಿಕ ಟಿಜೆ ಜ್ಞಾನವೇಲ್‌ ಅವರ ʼವೆಟ್ಟಯ್ಯನ್ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಬಳಿಕ ಲೋಕೇಶ್ ಕನಕರಾಜ್ ಅವರ ‘ತಲೈವರ್ 171’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಿಜಯ್ ವೆಂಕಟ್ ಪ್ರಭು ಅವರ ‘ಗೋಟ್’ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next