Advertisement

Politics ವಿದಾಯ ಟ್ವೀಟ್‌: ರಾಜೀವ್‌ ಚಂದ್ರಶೇಖರ್‌ ಸ್ಪಷ್ಟನೆ

01:57 AM Jun 10, 2024 | Team Udayavani |

ಹೊಸದಿಲ್ಲಿ: ಮೋದಿ ಪದಗ್ರಹಣ ಸಮಾರಂಭದ ದಿನ ಮಾಜಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ತಮ್ಮ ರಾಜಕೀಯ ಜೀವನ ಅಂತ್ಯಗೊಳಿಸುವುದಾಗಿ ಟ್ವೀಟ್‌ ಮಾಡಿದ್ದು, ಎಲ್ಲೆಡೆ ಸದ್ದು ಮಾಡಿತ್ತು. ವಾಸ್ತವವಾಗಿ ಅವರ ಸಿಬ್ಬಂದಿ ತಪ್ಪಾಗಿ ಟ್ವೀಟ್‌ ಮಾಡಿದ್ದರಿಂದ ಭಾರೀ ಗೊಂದಲ ಸೃಷ್ಟಿಯಾಗಿತ್ತು.

Advertisement

ಈ ಕುರಿತು ಸ್ಪಷ್ಟನೆ ನೀಡಿದ ರಾಜೀವ್‌, ರಾಜಕೀಯ ನಿವೃತ್ತಿ ಕುರಿತು ತಂಡದ ಸದಸ್ಯರೊಬ್ಬರು ಮಾಡಿದ ತಪ್ಪು ಟ್ವೀಟ್‌ನಿಂದ ಗೊಂದಲ ಸೃಷ್ಟಿಯಾಗಿದೆ. ಈ ಟ್ವೀಟ್‌ ಅಳಿಸಲಾಗಿದೆ. ಭಾರತ ಹಾಗೂ ತಿರುವನಂತಪುರದ ಪ್ರಗತಿಗೆ ಬಿಜೆಪಿ ಕಾರ್ಯಕರ್ತನಾಗಿ ಕಾರ್ಯನಿರ್ವಹಿಸಲು ಸದಾ ಬದ್ಧ ಎಂದು ತಿಳಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ತಿರುವನಂತಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಜೀವ್‌ ಅವರು ಕಾಂಗ್ರೆಸ್‌ನ‌ ಶಶಿ ತರೂರ್‌ ವಿರುದ್ಧ ಸೋತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next