Advertisement

Rajasthan; ಮಕ್ಕಳಿಗೆ ಕೇಸರಿ ಸೈಕಲ್‌:ಬಿಜೆಪಿ- ಕಾಂಗ್ರೆಸ್‌ ಜಟಾಪಟಿ

12:57 AM Sep 06, 2024 | Vishnudas Patil |

ಜೈಪುರ: ರಾಜಸ್ಥಾನದಲ್ಲಿ ಬಿಜೆಪಿ-ಕಾಂಗ್ರೆಸ್‌ ಮಧ್ಯೆ ಸೈಕಲ್‌ ಸಮರ ಶುರುವಾಗಿದೆ. 9ನೇ ತರಗತಿ ಬಾಲಕಿಯರಿಗೆ ಸರಕಾರ‌ದಿಂದ ಉಚಿತವಾಗಿ ವಿತರಿಸಲಾ ಗುವ ಸೈಕಲ್‌ ಬಣ್ಣವನ್ನು ಮತ್ತೆ “ಕೇಸರಿ’ ಮಾಡುತ್ತಿರುವುದು ಕಾಂಗ್ರೆಸ್‌ ಕಣ್ಣನ್ನು ಕೆಂಪಗಾಗಿಸಿದೆ. ಸಚಿವ ಮದನ್‌ ದಿಲ್ವಾರ್‌ ಇತ್ತೀಚೆಗೆ ವಿದ್ಯಾರ್ಥಿನಿಯರಿಗೆ ವಿತರಿಸುವ ಸೈಕಲ್‌ಗ‌ಳ ಬಣ್ಣವು ಕಪ್ಪು ಬಣ್ಣದಿಂದ ಕೇಸರಿಗೆ ಬದಲಾಗಲಿದೆ ಎಂದು ಘೋಷಿಸಿದ್ದರು.

Advertisement

ಈ ಹಿಂದೆ ಇದ್ದ ಕಾಂಗ್ರೆಸ್‌ ಸರಕಾರ‌ ಕಪ್ಪು ಬಣ್ಣದ ಸೈಕಲ್‌ ವಿತರಿಸುತ್ತಿತ್ತು. ಅದನ್ನೀಗ ಬಿಜೆಪಿ ಬದಲಾಯಿಸಿದೆ. ಅದಕ್ಕೂ ಮುನ್ನ ವಸುಂಧರಾ ರಾಜೇ ಸಿಎಂ ಆಗಿದ್ದಾಗ ಕೇಸರಿ ಬಣ್ಣದ ಸೈಕಲ್‌ ನೀಡುತ್ತಿತ್ತು. ಈ ಬಣ್ಣವನ್ನು ಕಾಂಗ್ರೆಸ್‌ ಬದಲಿಸಿ ಕಪ್ಪು ಬಣ್ಣ ಮಾಡಿತ್ತು. ಈಗ ಕಾಂಗ್ರೆಸ್‌ ಆಕ್ಷೇಪಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, “ಕೇಸರಿ ಬಗ್ಗೆ ಕಾಂಗ್ರೆಸ್‌ಗೆàಕೆ ದ್ವೇಷ?’ ಎಂದು ಕೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next