Advertisement

ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗೆ ಭಾರತ ರತ್ನ ನೀಡಿ : ರಾಜೇಂದ್ರ ಸೇನ್ ಒತ್ತಾಯ

09:32 PM Jul 13, 2021 | Team Udayavani |

ನವ ದೆಹಲಿ : ಕೋವಿಡ್ ಸೋಂಕಿನ ಅತ್ಯುತ್ತಮ ನಿರ್ವಹಣೆ ಮತ್ತು ಸಾಮಾಜಿಕ ಸೇವೆಗಾಗಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನವನ್ನು ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ನೀಡಬೇಕೆಂದು ರಾಜಸ್ಥಾನ್ ಕಾಂಗ್ರೆಸ್ ಒಬಿಸಿ ಸೆಲ್ ನ ಸಮನ್ವಯಕಾರ ರಾಜೇಂದ್ರ ಸೇನ್ ಒತ್ತಾಯಿಸಿದ್ದಾರೆ.

Advertisement

ಈ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಒತ್ತಾಯಿಸಿದ ಸೇನ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕೋವಿಡ್ -19 ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ, ಅದು ರಾಷ್ಟ್ರೀಯ ಮೆಚ್ಚುಗೆಯನ್ನೂ ಗಳಿಸಿದೆ ಎಂದಿದ್ದಾರೆ.

ಕೋವಿಡ್ ಪಾಸಿಟಿವ್  ಹೊರತಾಗಿಯೂ, ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ರಾಜ್ಯದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಮಾಡಿದ್ದಾರೆ. ಯಾವುದೇ ರೀತಿಯಲ್ಲಿ ಜನರಿಗೆ ಸಮಸ್ಯೆಯಾಗದಂತೆ ಮುಖ್ಯಮಂತ್ರಿಯ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಹಾಗಾಗಿ ಅವರು  ‘ಭಾರತ ರತ್ನ’  ನಾಗರಿಕ ಪ್ರಶಸ್ತಿಗೆ ಅರ್ಹ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ಲವ್‌ ಜಿಹಾದ್‌ ಪ್ರತಿಭಟನೆಯಿಂದ ರದ್ದಾದ ಮದುವೆ : ಜು.18ರ ಮದುವೆಗೆ ಪ್ರತಿಭಟನೆಯ ಬಿಸಿ

Advertisement
Advertisement

Udayavani is now on Telegram. Click here to join our channel and stay updated with the latest news.

Next