Advertisement

ಕಳೆದ ವರ್ಷದ ಬಜೆಟ್‌ ಓದಿದ ರಾಜಸ್ಥಾನ ಸಿಎಂ!

09:44 PM Feb 10, 2023 | Team Udayavani |

ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ 2023-24ನೇ ಸಾಲಿನ ಬಜೆಟ್‌ ಮಂಡಿಸುವ ಬದಲು ಕಳೆದ ವರ್ಷದ ಬಜೆಟ್‌ ಭಾಷಣ ಓದಿದ್ದಾರೆ.

Advertisement

ಈ ಮೂಲಕ ಅವರು ಶುಕ್ರವಾರ ಮುಜುಗರಪಡುವ ಸ್ಥಿತಿ ಉಂಟಾಯಿತು.

ವಿತ್ತ ಖಾತೆಯನ್ನೂ ಹೊಂದಿರುವ ಗೆಹ್ಲೋಟ್ ಕಲಾಪ ಆರಂಭವಾಗುತ್ತಿದ್ದಂತೆಯೇ 2022-23ರ ಸಾಲಿನ ಬಜೆಟ್‌ ಓದಿದರು. ಇದರ ಅರಿವಾಗುತ್ತಿದ್ದಂತೆ ಬಿಜೆಪಿ ಶಾಸಕರು ಗದ್ದಲು ಆರಂಭಿಸಿದರು. ಸದನದ ಬಾವಿಗಿಳಿದು ಘೋಷಣೆಗಳನ್ನು ಕೂಗಿದರು. ಎಚ್ಚೆತ್ತ ಗೆಹ್ಲೋಟ್ ಬಜೆಟ್‌ನ ಹೊಸ ಪ್ರತಿ ಪಡೆದು ಓದಿದರು.

200 ಕೋಟಿ ಮೀಸಲು:
ಓಲಾ, ಉಬರ್‌, ಸ್ವಿಗ್ಗಿ ಸೇರಿದಂತೆ ಗಿಗ್‌ ಕೆಲಸಗಾರರ ಕ್ಷೇಮಾಭಿವೃದ್ಧಿಗಾಗಿ ಬಜೆಟ್‌ನಲ್ಲಿ 200 ಕೋಟಿ ರೂ. ಮೀಸಲಿರಿಸಲಾಗಿದೆ. ಇದೇ ವೇಳೆ, ಪ್ರಮುಖವಾಗಿ ರಾಜ್ಯದ ಮಂಡಳಿಗಳು, ನಿಗಮಗಳ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆಯನ್ನೇ ಮುಂದುವರಿಸುವುದಾಗಿ ಘೋಷಿಸಿದ್ದಾರೆ. ಹಿಂದಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆ ಪ್ರಕಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next