Advertisement

ರಾಜಸ್ಥಾನ ಸ್ಪೀಕರ್ ಸುಪ್ರೀಂ ಕಟಕಟೆ ಏರಿದರೂ ಅನುಕೂಲವಾಗಿದ್ದು ಸಚಿನ್ ಪೈಲಟ್ &ಟೀಂಗೆ!

11:40 PM Jul 29, 2020 | Nagendra Trasi |

ನವದೆಹಲಿ: ಸಚಿನ್ ಪೈಲಟ್ ಹಾಗೂ ಕಾಂಗ್ರೆಸ್ ಬಂಡಾಯ ಶಾಸಕರ ವಿರುದ್ಧದ ಅನರ್ಹತೆ ಪ್ರಕ್ರಿಯೆಗೆ ತಡೆ ನೀಡಿದ್ದ ರಾಜಸ್ಥಾನ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಸ್ಪೀಕರ್ ಗೆ ಹಿನ್ನಡೆಯಾಗಿದ್ದು, ಇದರಿಂದ ಪೈಲಟ್ ಹಾಗೂ ಟೀಂಗೆ ಅನುಕೂಲವಾಗಿದೆ ಎಂದು ವರದಿ ತಿಳಿಸಿದೆ.

Advertisement

ಸಚಿನ್ ಪೈಲಟ್ ಹಾಗೂ ಇತರ ಬಂಡಾಯ ಶಾಸಕರ ವಿರುದ್ಧ ಕ್ರಮಕ್ಕೆ ಮುಂದಾಗಬಾರದು ಎಂದು ಸುಪ್ರೀಂಕೋರ್ಟ್ ಆದೇಶ ನೀಡುವ ಮೂಲಕ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ. ಅಲ್ಲದೇ ಇದರಿಂದ ಪೈಲಟ್ ಮತ್ತು ಬಂಡಾಯ ಶಾಸಕರು ತಾತ್ಕಾಲಿಕ ನಿಟ್ಟುಸಿರು ಬಿಡುವಂತಾಗಿದೆ.

ಏತನ್ಮಧ್ಯೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿಧಾನಸಭೆ ಅಧಿವೇಶನವನ್ನು ಆಗಸ್ಟ್ 14ರಿಂದ ಆರಂಭಿಸುವ ಹೊಸ ಪ್ರಸ್ತಾಪವನ್ನು ರಾಜ್ಯಪಾಲರಿಗೆ ಕಳುಹಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಕೊನೆಗೂ ರಾಜಸ್ಥಾನ ಮುಖ್ಯಮಂತ್ರಿ ಗೆಹ್ಲೋಟ್ ಮತ್ತು ರಾಜ್ಯಪಾಲ ಕಲ್ ರಾಜ್ ನಡುವಿನ ಜಟಾಪಟಿಗೆ ತೆರೆ ಬಿದ್ದಿದೆ.

ಗೆಹ್ಲೋಟ್ ಅವರ ಹೊಸ ಪ್ರಸ್ತಾವನೆ ಪ್ರಕಾರ ಆಗಸ್ಟ್ 14ರಿಂದ ರಾಜಸ್ಥಾನ ವಿಧಾನಸಭೆ ಅಧಿವೇಶನ ನಡೆಸಲು ರಾಜ್ಯಪಾಲರು ಹಸಿರು ನಿಶಾನೆ ತೋರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next