Advertisement

ರಾಜರಾಜೇಶ್ವರಿನಗರ, ಶಿರಾ ಮಿನಿ ಫೈಟ್: ರಂಗ ಪ್ರವೇಶಕ್ಕೆ ಸಂಘ ಪರಿವಾರ ಸಜ್ಜು

12:30 AM Oct 11, 2020 | mahesh |

ಬೆಂಗಳೂರು: ರಾಜರಾಜೇಶ್ವರಿನಗರ, ಶಿರಾ ಕ್ಷೇತ್ರದ ಉಪಚುನಾವಣೆ ಕಣಕ್ಕೆ ಕಮಲ ನಾಯಕರು ಪ್ರವೇಶಿಸುವ ಮೊದಲೇ ಸಂಘ ಪರಿವಾರದ ಕಾರ್ಯಕರ್ತರ ಪಡೆ ಸೋಮವಾರದಿಂದ ಪ್ರಚಾರ ಕಣದ ರಂಗ ಪ್ರವೇಶಕ್ಕೆ ಸಜ್ಜಾಗಿದೆ.

Advertisement

ರಾಜರಾಜೇಶ್ವರಿ ನಗರದಲ್ಲಿ 150ಕ್ಕೂ ಹೆಚ್ಚು ಸ್ವಯಂಸೇವಕರು ಸೋಮವಾರದಿಂದ ಪ್ರಚಾರ ಕಾರ್ಯಕ್ಕಿಳಿಯಲಿದ್ದಾರೆ. ಶಿರಾದಲ್ಲೂ ಸಂಘ ಪರಿವಾರದ 500ಕ್ಕೂ ಹೆಚ್ಚು ಕಾರ್ಯಕರ್ತರು ಮತಗಟ್ಟೆವಾರು ಪ್ರಚಾರಕ್ಕೆ ಸಜ್ಜಾಗಿದ್ದಾರೆ.

ರಾಜರಾಜೇಶ್ವರಿ ನಗರ, ಶಿರಾ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರಾಜ್ಯ ಕೋರ್‌ ಕಮಿಟಿಯಿಂದ ರವಾನೆಯಾಗಿದ್ದು, ವರಿಷ್ಠರ ಅಂಗಳದಲ್ಲಿದೆ. ಶಿರಾದಲ್ಲಿ ಅಭ್ಯರ್ಥಿಗಳನ್ನು ಘೋಷಿಸಿರುವ ಕಾಂಗ್ರೆಸ್‌, ಜೆಡಿಎಸ್‌ ಈಗಾಗಲೇ ಪ್ರಚಾರ ಆರಂಭಿಸಿವೆ. ರಾಜರಾಜೇ ಶ್ವರಿ ನಗರದಲ್ಲೂ ಕಾಂಗ್ರೆಸ್‌ ಅಭ್ಯರ್ಥಿ ಮೊದಲ ಸುತ್ತಿನ ಪ್ರಚಾರ ಆರಂಭಿಸಿದ್ದಾರೆ. ಉಭಯ ಕ್ಷೇತ್ರ ಗಳಲ್ಲೂ ಈಗಾಗಲೇ ಸಂಘಟನೆ ಬಲಪಡಿಸುವ ಕಾರ್ಯದಲ್ಲಿ ಬಿಜೆಪಿ ಸಕ್ರಿಯವಾಗಿದ್ದು, ಸರಣಿ ಸಭೆಗಳನ್ನು ನಡೆಸಿ ಪ್ರಚಾರಕ್ಕೆ ಅಣಿಯಾಗುತ್ತಿದೆ.

ಮನೆ ಮನೆ ಪ್ರಚಾರ
ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಸೋಮವಾರದಿಂದ 150ಕ್ಕೂ ಹೆಚ್ಚು ಸ್ವಯಂ ಸೇವಕರು ಪ್ರಚಾರ ಆರಂಭಿ ಸಲಿದ್ದಾರೆ. ಕ್ಷೇತ್ರದಲ್ಲಿ 9 ವಾರ್ಡ್‌ಗಳಿದ್ದು, ಪ್ರತಿ ವಾರ್ಡ್‌ಗೆ ಒಬ್ಬ ಮಂಡಲ ಪದಾಧಿಕಾರಿ, ಜತೆಗೆ 15 ಮಂದಿ ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. ಈ ತಂಡಗಳು ಆಯಾ ವಾರ್ಡ್‌ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಲಿವೆ.

500 ಮಂದಿ ಪಡೆ
ಇದುವರೆಗೆ ಕಾಂಗ್ರೆಸ್‌, ಜೆಡಿಎಸ್‌ ಗೆಲುವು ಸಾಧಿಸುತ್ತಾ ಬಂದಿರುವ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸುವ ಉತ್ಸಾಹದಲ್ಲಿ ಬಿಜೆಪಿ ಸಂಘಟನೆ ಕಾರ್ಯ ಆರಂಭಿಸಿದೆ. ಉಪ ಚುನಾವಣೆ ಘೋಷಣೆಗೂ ಮೊದಲೇ “ಕೇಡರ್‌’ ವ್ಯವಸ್ಥೆ ರೂಪಿಸಿ ಸಂಘಟನೆ ಬಲಪಡಿಸಲು ಒತ್ತು ನೀಡಿದ್ದ ಕಮಲ ಪಕ್ಷದ ಪರ ಪ್ರಚಾರಕ್ಕೆ ಈಗ ಸಂಘ ಪರಿವಾರವೂ ಜತೆಗೂಡುತ್ತಿದೆ. ಸಂಘ ಪರಿವಾರದ 500ಕ್ಕೂ ಹೆಚ್ಚು ಮಂದಿಯ ಪಡೆ ರೂಪುಗೊಂಡಿದ್ದು, ಒಂದೆರಡು ದಿನದಲ್ಲೇ ಪ್ರಚಾರ ಕಾರ್ಯಕ್ಕೆ ಧುಮುಕಲಿದೆ.

Advertisement

ಬೃಹತ್‌ ಸಭೆ, ರ್ಯಾಲಿಗಳ ಬದಲು ಸಣ್ಣ, ಸಭೆಗಳನ್ನು ನಡೆಸಿ ಮನೆ ಸಂಪರ್ಕ ಕಾರ್ಯಕ್ಕೆ ಒತ್ತು ನೀಡಲಾಗುವುದು. ಬೂತ್‌ ಮಟ್ಟದಲ್ಲಿ ವಾಟ್ಸಾಪ್‌ ಗ್ರೂಪ್‌ಗ್ಳನ್ನು ರಚಿಸಿದ್ದು, ವರ್ಚ್ಯುವಲ್‌ ಸಭೆಗಳನ್ನು ನಡೆಸಲಾಗುವುದು.
-ಎನ್‌. ರವಿಕುಮಾರ್‌, ಶಿರಾ ಕ್ಷೇತ್ರದ ಉಪಚುನಾವಣೆ ಉಸ್ತುವಾರಿ

Advertisement

Udayavani is now on Telegram. Click here to join our channel and stay updated with the latest news.

Next