Advertisement

ಕರಾವಳಿಯಲ್ಲಿ ಮಳೆಗಾಲದ ವಾತಾವರಣ

01:11 AM Jun 27, 2019 | Sriram |

ಮಂಗಳೂರು: ಕರಾವಳಿಯಾದ್ಯಂತ ಬುಧವಾರ ಹದವಾದ ಮಳೆ ಸುರಿದಿದ್ದು, ಕೊನೆಗೂ ಮಳೆ ಗಾಲದ ವಾತಾವರಣ ಕಾಣಿಸಿಕೊಂಡಿದೆ. ಇದೇ ವೇಳೆ ಕೆಲವೆಡೆ ಸಣ್ಣಪುಟ್ಟ ಅವಘಡಗಳೂ ಸಂಭಿವಿಸಿವೆ.

Advertisement

ಮಂಗಳೂರು ನಗರದಲ್ಲಿ ದಿನವಿಡೀ ಬಿಟ್ಟೂ ಬಿಟ್ಟು ಮಳೆಯಾಗುತ್ತಿತ್ತು. ಬೆಳ್ತಂಗಡಿ, ಗುರುವಾಯನಕೆರೆ, ಧರ್ಮಸ್ಥಳ, ಮೂಲ್ಕಿ, ಪುಂಜಾಲಕಟ್ಟೆ, ಬಂಟ್ವಾಳ, ಬಿ.ಸಿ. ರೋಡ್‌, ವೇಣೂರು, ಕಡಬ, ವಿಟ್ಲ, ಕನ್ಯಾನ, ಸುಳ್ಯ, ಸುರತ್ಕಲ್‌, ಪುತ್ತೂರು, ಉಪ್ಪಿನಂಗಡಿ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಮಳೆಯಾಗಿದೆ.

ಉಡುಪಿ, ಕುಂದಾಪುರ, ಕೋಟೇಶ್ವರ, ತೆಕ್ಕಟ್ಟೆ, ಹೆಬ್ರಿ, ಸಿದ್ದಾಪುರ, ಕಾಪು, ಪಡುಬಿದ್ರಿ, ಬ್ರಹ್ಮಾವರ, ಶಿರ್ವ, ಬೆಳ್ಮಣ್‌ ಪರಿಸರದಲ್ಲಿ ಉತ್ತಮ ಮಳೆಯಾಗಿದೆ.

ತೆಕ್ಕಟ್ಟೆಯಲ್ಲಿ ಕೃತಕ ನೆರೆ
ತೆಕ್ಕಟ್ಟೆ ಪರಿಸರದಲ್ಲಿ ಬುಧವಾರ ಉತ್ತಮ ಮಳೆಯಾಗಿದ್ದು, ಅಸಮರ್ಪಕ ಚರಂಡಿ ವ್ಯವಸ್ಥೆಯಿಂದಾಗಿ ಹೆದ್ದಾರಿ ಯಲ್ಲಿ ಕೃತಕ ನೆರೆ ಸೃಷ್ಟಿಯಾಯಿತು. ಹಲವಾರು ದ್ವಿಚಕ್ರ ವಾಹನಗಳ ಹತೋಟಿ ತಪ್ಪಿ ಕೆಸರು ನೀರಿಗೆ ಉರುಳಿದ ಘಟನೆಯೂ ನಡೆಯಿತು.

ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಕರಾವಳಿ ಭಾಗಗಳಲ್ಲಿ ಮುಂದಿನ 2 ದಿನಗಳ ಕಾಲ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next