Advertisement

ಕಾವ್ಯ ಮಲ್ಲಿಗೆ : ಮುಂಗಾರ ಕೆಲಸಕ್ಕೆ ಅಣಿಯಾಗಿಹರು

03:34 PM Jul 25, 2021 | Team Udayavani |

 ಮುಂಗಾರ ಕೆಲಸಕ್ಕೆ ಅಣಿಯಾಗಿಹರು..

Advertisement

ಮೋಡವು ಕವಿದಿದೆ ಮಳೆಯದು ಸುರಿಯುತಿದೆ

ಮುಂಗಾರ ಆರಂಭ ಕೃಷಿ ಕೆಲಸದಾರಂಭ.

ರಾಗಿ ಅಂಬಲಿ ಗಂಜಿ ಊಟವನು ಮಾಡಿಹರು

ಕಂಬಳಿಯ ಹೊದ್ದಿಹರು ಹೊಲಕೆ ನಡೆದಿಹರು.

Advertisement

ಜಡಿಮಳೆಯ ಹೊಡೆತದ ನೀರಲಿ ತೊಯ್ದಿಹರು

ಗಡಗಡ ನಡುಗುತ್ತ ದಿನವಿಡೀ ದುಡಿಯುವರು.

ಎಲೆ ಅಡಿಕೆ ಜಗಿಯುತ್ತ ಬೀಡಿಯ ಸೇದುತ್ತ

ಸುಡುತಿಹ ಚಹವನ್ನು ಗುಟುಕು ಕುಡಿಯುತ್ತ.

ಮೈಯ ಬಿಸಿ ಏರಿದೆ ಚಳಿ ನಡುಕ ತಂದಿದೆ

ಮತ್ತೆ ದುಡಿಯುವ ತುಡಿತ ಉಲ್ಲಾಸ ಬಂದಿದೆ.

ಪಾಡªನವ ಹಾಡುತ್ತ ನೇಜಿಯನು ನೆಡುತಿಹರು

ಎಲ್ಲರೂ ಒಗ್ಗೂಡಿ ಮೈ ಬಗ್ಗಿ ದುಡಿತಿಹರು.

ಸೂರ್ಯಾಸ್ತದ ಸಮಯ ಬಚ್ಚಲಲಿ ಬೆಂಕಿ ಉರಿ ಬಿಸಿನೀರ ಸ್ನಾನದಲಿ ದಣಿವನಾರಿಸುವವರು.

ಸಿರಿತನದ ವೈಭವವು ಇವರಿಗದು ಬೇಕಿಲ್ಲ

ನಾಳೆಯ ಚಿಂತೆ ಅವರಿಗೆಂದೂ ಇಲ್ಲ

ಬಿಸಿಬಿಸಿ ಗಂಜಿಯನು ಸಂಜೆಯೇ ಉಣ್ಣುವರು

ಸುಖದ ನಿದ್ದೆಯ ಮಾಡಿ ನಾಳೆಗಣಿಯಾಗುವರು

 

-ಭಾರತಿ ಡಿ ತಾಮ್ಹನ್‌ ಕರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next