Advertisement

ತಮಿಳುನಾಡು, ಕೇರಳದಲ್ಲಿ ಮತ್ತೆ ಮಳೆ : ಕರ್ನಾಟಕದಲ್ಲೂ ಪರಿಣಾಮ!

09:47 AM Nov 23, 2021 | Team Udayavani |

ಚೆನ್ನೈ/ಹೈದರಾಬಾದ್‌: ತಮಿಳುನಾಡು ಮತ್ತು ಕೇರಳ ಸದ್ಯಕ್ಕಂತೂ ಮಳೆಯ ಕಾಟದಿಂದ ಪಾರಾಗುವ ಲಕ್ಷಣ ಗೋಚರಿಸುತ್ತಿಲ್ಲ. ಈಗಾಗಲೇ ಸತತ ವರ್ಷಧಾರೆ, ಪ್ರವಾಹ, ಮಳೆ ಸಂಬಂಧಿ ದುರಂತಗಳಿಂದ ಕಂಗೆಟ್ಟಿರುವ ಈ ರಾಜ್ಯಗಳಿಗೆ ಮತ್ತೊಂದು ಆಘಾತ ಎದುರಾಗಿದೆ.

Advertisement

ದಕ್ಷಿಣ ಅಂಡಮಾನ್‌ ಸಮುದ್ರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇನ್ನು ನಾಲ್ಕೈದು ದಿನಗಳಲ್ಲಿ ತಮಿಳುನಾಡು ಕರಾವಳಿಯತ್ತ ಚಲಿಸಲಿದೆ. ಇದರ ಪರಿಣಾಮವಾಗಿ ಬುಧವಾರದಿಂದ ತಮಿಳುನಾಡು, ಪುದುಚೇರಿ, ಕಾರೈಕಲ್‌ ಗಳಲ್ಲಿ ಭಾರೀ ಮಳೆಯಾಗಲಿದೆ. ಕೊಯ ಮತ್ತೂರು, ಈರೋಡ್‌, ಕೃಷ್ಣಗಿರಿ, ಪುದುಕೋಟ್ಟೈ, ಅರಿಯಲೂರು, ಕಡಲೂರು, ಕರೂರು, ಪೆರಂಬಲೂರು, ತಿರುಚ್ಚಿ ಸಹಿತ ಹಲವು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್‌ ಜಾರಿ ಮಾಡಲಾಗಿದೆ. ಕೇರಳ, ಮಹಾರಾಷ್ಟ್ರ ಮತ್ತು ಗೋವಾದಲ್ಲೂ ಧಾರಾಕಾರ ಮಳೆಯಾಗಲಿದೆ. ಕರ್ನಾಟಕದ ಮಲೆನಾಡು, ಕರಾವಳಿಯಲ್ಲಿ ಸಾಧಾರಣ ಮಳೆ ಬೀಳುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ:ಕಿರುತೆರೆ ನಟಿ ಮಾಧವಿ ಗೋಗಟೆ ನಿಧನ

ಇನ್ನೂ ಸರಿಯಾಗದ ತಿರುಪತಿ ಸಂಪರ್ಕ
ತಿರುಮಲ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. ತಿರುಪತಿ ಯನ್ನು ಬೆಂಗಳೂರು, ಚೆನ್ನೈ, ಹೈದರಾಬಾದ್‌, ವಿಜಯವಾಡಕ್ಕೆ ಸಂಪರ್ಕಿಸುವ ತಾತ್ಕಾಲಿಕ ರಸ್ತೆಗಳ ಸಂಚಾರ ಸ್ಥಗಿತಗೊಂಡಿದೆ. ದೇಗುಲ ನಗರಿಯನ್ನು ಸಂಪರ್ಕಿಸುವ ಪ್ರಮುಖ ರೈಲ್ವೇ ಮಾರ್ಗ ಹಾನಿಗೀಡಾಗಿದೆ. ನ. 18ರಿಂದ 30ರ ಅವಧಿಯಲ್ಲಿ ತಿಮ್ಮಪ್ಪನ ದರ್ಶನಕ್ಕೆಂದು ಟಿಕೆಟ್‌ ಬುಕ್‌ ಮಾಡಿದ್ದ ಭಕ್ತರಿಗೆ ಬೇರೆ ದಿನ ಅವಕಾಶ ಕಲ್ಪಿಸಲಾಗುತ್ತದೆ ಎಂದು ಟಿಟಿಡಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next