Advertisement
ಪಟ್ಟಣದಿಂದ ತಡಕಲ್ ಮಾರ್ಗವಾಗಿ ಸಂಚರಿಸುವ ಮಲಂಗ ಮತ್ತು ಸುಭಾಷ ಗುತ್ತೇದಾರ ತೋಟದ ಹತ್ತಿರದಿಂದ ಹಾಯ್ದು ಹೋಗಿರುವ ರಾಜ್ಯ ಹೆದ್ದಾರಿ ಸೇತುವೆಗೆ ಮತ್ತು ರಸ್ತೆಗೆ ಹಾನಿ ಆಗಿದ್ದರಿಂದ ಮತ್ತೆ ಸಂಚಾರಕ್ಕೆ ತೊಂದರೆ ಉಂಟಾಗಿ ವಾಹನಗಳು ಮಾರ್ಗ ಬದಲಿಸಿ ಸಂಚರಿಸುತ್ತಿವೆ.
Related Articles
Advertisement
ಕಲಬುರಗಿ ತಲುಪಲು ಹೆಚ್ಚು ಸಮಯ ಬೇಕಿದೆ. ಚಿಂಚನಸೂರ ಮಾರ್ಗವಾಗಿ ಹೋಗಬೇಕಾದರೆ ರಸ್ತೆ ಅವ್ಯವಸ್ಥೆಯಿಂದ ಕೂಡಿದೆ. ಈ ರಸ್ತೆ ಶೀಘ್ರವೇ ದುರಸ್ತಿಗೊಳಿಸಬೇಕು ಎಂದು ಈ ಭಾಗದ ಸಾರ್ವಜನಿಕರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಜೆಡಿಎಸ್ ಒತ್ತಾಯ: ತಾಲೂಕಿನ ಕೆಲವು ಕಡೆ ರಸ್ತೆ ನಿರ್ಮಾಣ ಮಾಡಿ ಕೈಗೊಂಡ ಸೇತುವೆ ಮತ್ತು ಅದರ ಬಳಿಯ ರಸ್ತೆ ಕಾಮಗಾರಿ ಕಳಪೆ ಆಗಿದ್ದರಿಂದ ಕೊಚ್ಚಿ ಹೋಗಿದೆ. ಈ ಕಾಮಗಾರಿ ಬಗ್ಗೆ ಜಿಲ್ಲಾಧಿಕಾರಿಗಳು ತನಿಖೆ ನಡೆಸಬೇಕು ಎಂದು ಜೆಡಿಎಸ್ ಮುಖಂಡ ಸೂರ್ಯಕಾಂತ ಕೊರಳ್ಳಿ ಆಗ್ರಹಿಸಿದ್ದಾರೆ.
ಪರಿಹಾರಕ್ಕೆ ಬಿಜೆಪಿ ಒತ್ತಾಯ: ಶಾಸಕರು ಪಕ್ಷಾತರ ರಾಜಕಾರಣದಲ್ಲೇ ಕಾಲ ಕಳೆಯುತ್ತಿದ್ದಾರೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಇಂಥ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ ಒತ್ತಾಯಿಸಿದ್ದಾರೆ.
ಸಿಪಿಐ ಒತ್ತಾಯ: ಉದ್ಯೋಗ ಖಾತ್ರಿಯಲ್ಲಿ ಸಮಪರ್ಕವಾಗಿ ಎಲ್ಲೆಡೆ ಬದು ನಿರ್ಮಾಣ ಕೆಲಸ ಮಾಡಿದ್ದರೆ ಮಳೆಯಾದ ಮೇಲೂ ಜಮೀನುಗಳ ಮಣ್ಣು ಕೊಚ್ಚಿ ಹೋಗುತ್ತಿರಲಿಲ್ಲ. ಇದಕ್ಕೆ ಆಡಳತ ನಿರ್ಲಕ್ಷವೇ ಸಾಕ್ಷಿ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಮೌಲಾ ಮುಲ್ಲಾ ಆರೋಪಿಸಿದ್ದಾರೆ.
* ಮಹಾದೇವ ವಡಗಾಂವ