Advertisement

Rain: 8 ರಾಜ್ಯಗಳಲ್ಲಿ ಮಳೆಯ ಎಚ್ಚರಿಕೆ

12:14 AM Sep 16, 2023 | Team Udayavani |

ಹೊಸದಿಲ್ಲಿ: ಕಳೆದೊಂದು ತಿಂಗಳಿಂದ ನಾಪತ್ತೆ­ಯಾಗಿದ್ದ ಮಳೆರಾಯ ಈಗ ಮತ್ತೆ ನಿಧಾನಕ್ಕೆ ಬೇರೆ ಬೇರೆ ರಾಜ್ಯಗಳಲ್ಲಿ ಅಬ್ಬರಿಸತೊಡಗಿದ್ದಾನೆ. ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳ ಸೇರಿದಂತೆ 8 ರಾಜ್ಯಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

ಸೆ.15ರಿಂದ 18ರವರೆಗೆ ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಭಾರೀ ಮಳೆಯಾಗಲಿದ್ದು, 17ರಂದು ಅಂಡಮಾನ್‌, ನಿಕೋಬಾರ್‌ ದ್ವೀಪ ದಲ್ಲಿ ಧಾರಾಕಾರ ಮಳೆ ಸುರಿಯಲಿದೆ ಎಂದು ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ತೆಲಂಗಾಣ, ಕೇರಳ ದಲ್ಲಿ ಶನಿವಾರ ವಿಪರೀತ ಮಳೆಯಾಗ ಲಿದ್ದು, ಕರ್ನಾಟಕದಲ್ಲೂ ಇದೇ ಪರಿಸ್ಥಿತಿ ಇರಲಿದೆ. ಮುಂದಿನ 2-3 ದಿನಗಳ ಕಾಲ ದಿಲ್ಲಿ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡ ದಲ್ಲೂ ವರುಣ ಅಬ್ಬರಿಸಲಿದ್ದಾನೆ ಎಂದೂ ಹೇಳಿದೆ.

ಯೆಲ್ಲೋ ಅಲರ್ಟ್‌: ಹಿಮಾಚಲ ಪ್ರದೇಶದ 6 ಜಿಲ್ಲೆಗಳಲ್ಲಿ ಸೆ.21ರವರೆಗೂ ಮಳೆಯಾಗುವ ಸಾಧ್ಯತೆಯಿರುವ ಕಾರಣ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಸಿಮೌìರ್‌ನಲ್ಲಿ ದಿಢೀರ್‌ ಪ್ರವಾಹದ ಎಚ್ಚರಿಕೆಯನ್ನೂ ನೀಡಲಾಗಿದೆ. ಈ ನಡುವೆ, ಹಿಮಾಚಲ ಸಿಎಂ ಸುಖ್ವೀಂದರ್‌ ಸಿಂಗ್‌ ಸುಖು ಅವರು ತಮ್ಮೆಲ್ಲ ಉಳಿತಾಯದ ಮೊತ್ತವನ್ನು ಅಂದರೆ 51 ಲಕ್ಷ ರೂ.ಗಳನ್ನು ರಾಜ್ಯ ವಿಪತ್ತು ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next