ಮಂಗಳೂರು/ ಉಡುಪಿ: ಕರಾವಳಿಯಲ್ಲಿ ರವಿವಾರ ಮಳೆ ಮತ್ತೆ ಸ್ವಲ್ಪ ಬಿಡುವು ನೀಡಿತ್ತು. ಪುತ್ತೂರು, ಸುಳ್ಯ, ಬೆಳ್ತಂಗಡಿ, ಮಂಗಳೂರು, ಉಡುಪಿ, ಕುಂದಾಪುರ, ಬ್ರಹ್ಮಾವರ, ಪಡುಬಿದ್ರಿ, ಕಾಪು, ಕುಂದಾಪುರ, ಕಾರ್ಕಳ, ಹೆಬ್ರಿ, ಅಜೆಕಾರು ಭಾಗದಲ್ಲಿ ಹಲವೆಡೆ ಬಿಸಿಲಿನ ನಡುವೆ ಸಾಧಾರಣ ಮಳೆಯಾಗಿದೆ. ಸಂಜೆ ಬಳಿಕ ಕೆಲವೆಡೆ ಮಳೆ ಸುರಿದಿದೆ.
ಮರ ಬಿದ್ದು ಮನೆಗೆ ಹಾನಿ
ವಿಟ್ಲ: ವೀರಕಂಭ ಗ್ರಾಮದ ಕೆಲಿಂಜ ನಗ್ರಿಮೂಲೆ ಚೆನ್ನಮ್ಮ ಸಫಲ್ಯ ಅವರ ಮನೆಗೆ ಮರ ಬಿದ್ದು ಹಾನಿ ಸಂಭವಿಸಿದೆ. ಗ್ರಾಮ ಕರಣಿಕ ಪ್ರಕಾಶ್, ಗ್ರಾ.ಪಂ. ಅಧ್ಯಕ್ಷ ದಿನೇಶ್, ಸದಸ್ಯರಾದ ಜಯಪ್ರಸಾದ್, ಸಂದೀಪ್ ಭೇಟಿ ನೀಡಿದರು.
ಎಲ್ಲೋ ಅಲರ್ಟ್: ಮುಂಗಾರು ಮಳೆ ಬಿರುಸು ಪಡೆ ಯುವ ನಿರೀಕ್ಷೆ ಇದ್ದು, ಜೂ. 27ರಿಂದ 30ರವರೆಗೆ ಎಲ್ಲೋ ಅಲರ್ಟ್ ಘೊಷಿಸಲಾಗಿದೆ. ಈ ವೇಳೆ ಉತ್ತಮ ಮಳೆ, ಗುಡುಗು ಸಹಿತ ಗಾಳಿ ಕೂಡ ಇರಲಿದೆ.