Advertisement
ನಗರದ ಹೊರವಲಯದಲ್ಲಿ ಮಳೆ ತುಸು ಜೋರಾಗಿತ್ತು. ಹೃದಯಭಾಗದಲ್ಲಿ ಗುಡುಗಿನ ಅಬ್ಬರ ಹೆಚ್ಚಿತ್ತು. ಸುಮಾರು ಒಂದು ತಾಸು ಸುರಿದ ಮಳೆಗೆ ಮೋರಿಗಳು, ಅಂಡರ್ಪಾಸ್ಗಳು, ರಸ್ತೆಗಳು ತುಂಬಿಹರಿದವು. ಜನರ ಸಂಚಾರ ಇಲ್ಲದ್ದರಿಂದ ಯಾವುದೇ ಸಂಚಾರದಟ್ಟಣೆ ಇರಲಿಲ್ಲ. ಕೆಜಿ ಹಳ್ಳಿ, ಹೆಮ್ಮಿಗೆಪುರ, ಕೋರಮಂಗಲ, ಎಚ್ಎಸ್ಆರ್ ಲೇಔಟ್ ಮತ್ತಿತರ ಕಡೆಗಳಲ್ಲಿ ಗರಿಷ್ಠ 53ರಿಂದ ಕನಿಷ್ಠ 20 ಮಿ.ಮೀ. ಮಳೆ ದಾಖಲಾಗಿದೆ. ಬಾಣಸವಾಡಿಯ 100 ಅಡಿ ರಸ್ತೆಯಲ್ಲಿ ಮರವೊಂದು ಧರೆಗುರುಳಿದೆ. ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಬಿಸಿಲ ಬೇಗೆಯ ನಗರಕ್ಕೆ ತಂಪೆರೆದ ಮಳೆ
01:36 PM Apr 07, 2020 | Suhan S |
Advertisement
Udayavani is now on Telegram. Click here to join our channel and stay updated with the latest news.