Advertisement
17 ಕೋ.ರೂ. ಪ್ರಸ್ತಾವನೆಜಿ.ಪಂ. ಸಿಇಒ ಡಾ| ಎಂ.ಆರ್. ರವಿ ಮಾತನಾಡಿ, ಜಿಲ್ಲೆಯಲ್ಲಿ 268 ರಸ್ತೆ, ಸೇತುವೆಗಳು, 101 ಚರಂಡಿಗಳು, 120
ತಡೆಗೋಡೆಗಳು ಸಹಿತ 958 ಸಾರ್ವಜನಿಕ ಅಸ್ತಿಗಳಿಗೆ ಹಾನಿಯಾಗಿದೆ. ದುರಸ್ತಿಗೆ ಪ್ರಕೃತಿ ವಿಕೋಪ ನಿಧಿಯಲ್ಲಿ 17 ಕೋ.ರೂ. ನೀಡುವಂತೆ ಜಿಲ್ಲಾಧಿಕಾರಿಗೆ ಪ್ರಸಾವ ಸಲ್ಲಿಸಲಾಗಿದೆ. ಸುಳ್ಯ ಕಾಂತಮಂಗಲ ಸೇತುವೆಯ ದುರಸ್ತಿಗೆ ಸಿಆರ್ಎಫ್ನಿಂದ 10 ಲಕ್ಷ ರೂ. ಹಾಗೂ ಜಿ.ಪಂ.ನಿಂದ 5 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದರು.
ರಾ.ಹೆ. 169ರಲ್ಲಿ ಗುರುಪುರ ಸೇತುವೆಯ ದೃಢತೆ ಬಗ್ಗೆ ತಜ್ಞರ ತಂಡ ಅಡಿಪಾಯ, ಕಬ್ಬಿಣ, ಕಾಂಕ್ರೀಟ್ ಸಹಿತ ಸೇತುವೆಯ ಪರಿಶೀಲನೆ ನಡೆಸಿದೆ. ಇನ್ನೆರಡು ದಿನಗಳಲ್ಲಿ ನಿಖರ ವರದಿ ಬರುವ ನಿರೀಕ್ಷೆ ಇದೆ ಎಂದು ರಾಷ್ಟ್ರೀಯ ಹೆದ್ದಾರಿ ಕಾರ್ಯನಿರ್ವಾಹಕ ಎಂಜಿನಿಯರ್ ವಿವರಿಸಿದರು.
Related Articles
Advertisement
ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಾಸಕರಾದ ಸಂಜೀವ ಮಠಂದೂರು, ಉಮಾನಾಥ ಕೋಟ್ಯಾನ್, ರಾಜೇಶ್ನಾೖಕ್ ಉಳಿಪಾಡಿ, ಹರೀಶ್ ಪೂಂಜ, ವೇದವ್ಯಾಸ ಕಾಮತ್, ಡಾ| ಭರತ್ ಶೆಟ್ಟಿ ಉಪಸ್ಥಿತರಿದ್ದರು.
ಶಿರಾಡಿ: ಜು. 15ರ ವೇಳೆಗೆ ಮುಕ್ತಶಿರಾಡಿ ಘಾಟಿ ರಸ್ತೆಯಲ್ಲಿ ಕಾಂಕ್ರೀಟ್ ಕಾಮಗಾರಿ ಮುಗಿದಿದೆ. ಕ್ಯೂರಿಂಗ್ ಸೇರಿದಂತೆ ಇತರ ಕೆಲವು ಕೆಲಸಗಳಿಗಾಗಿ ಇನ್ನೂ 15 ದಿನಗಳ ಕಾಲಾವಕಾಶ ಬೇಕು. ಜು. 15ರ ವೇಳೆಗೆ ರಸ್ತೆ ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆ ಇದೆ ಎಂದು ರಾ. ಹೆದ್ದಾರಿ ಕಾರ್ಯನಿರ್ವಾಹಕ ಎಂಜಿನಿಯರ್ ಸುಬ್ಬರಾಮ ಹೊಳ್ಳ ತಿಳಿಸಿದರು. ನಾನು ಶಿರಾಡಿ ಘಾಟಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕೆಲವು ಸಣ್ಣಪುಟ್ಟ ಕಾಮಗಾರಿಗಳ ಆವಶ್ಯಕತೆಯ ಬಗ್ಗೆ ಸೂಚನೆ ನೀಡಿದ್ದೇನೆ ಎಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದರು.
ಶಿರಾಡಿ ಘಾಟಿ ರಸ್ತೆ ಜು. 5ರ ವೇಳೆಗೆ ರಸ್ತೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಈ ಹಿಂದೆ ಹೇಳಲಾಗಿತ್ತು.